ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಸೆಪ್ಟೆಂಬರ್,1,2,3,2017

Question 1

1. 2017 ಅಂತಾರಾಷ್ಟ್ರೀಯ ಹಿಂದೂ ಸಮ್ಮೇಳನ ಯಾವ ದೇಶದಲ್ಲಿ ನಡೆಯಿತು?

A
ನೇಪಾಳ
B
ಮಾರಿಷಸ್
C
ಶ್ರೀಲಂಕಾ
D
ಭಾರತ
Question 1 Explanation: 
ನೇಪಾಳ

2017 ಅಂತಾರಾಷ್ಟ್ರೀಯ ಹಿಂದೂ ಸಮ್ಮೇಳನ 3 ದಿನಗಳ ಕಾಲ ನೇಪಾಳದ ಕಠ್ಮಂಡುವಿನಲ್ಲಿ ನಡೆಯಿತು. ‘Emerging spiritualism: Renaissance of Hinduism’ ಇದು ಈ ವರ್ಷದ ಥೀಮ್. ಕಠ್ಮಂಡುವನ್ನು ಜಾಗತಿಕ ಹಿಂದೂ ರಾಜಧಾನಿಯನ್ನಾಗಿ ಮಾಡುವುದು ಸಮ್ಮೇಳನದ ಗುರಿ ಆಗಿತ್ತು. ಭಾರತ, ಬಾಂಗ್ಲಾದೇಶ, ಪಾಕಿಸ್ತಾನ, ಯುಎಸ್ ಮತ್ತು ಯುಕೆ ಸೇರಿದಂತೆ ವಿವಿಧ ದೇಶಗಳ ಸುಮಾರು 500 ಹಿಂದೂ ವಿದ್ವಾಂಸರು, ಧಾರ್ಮಿಕ ನಾಯಕರು, ಹಿಂದೂ ಕಾರ್ಯಕರ್ತರು ಈ ಸಮ್ಮೇಳನದಲ್ಲಿ ಭಾಗವಹಿಸಿದ್ದರು.

Question 2

2. ಈ ಕೆಳಗಿನ ಯಾರು “ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ (ಸಿಬಿಎಸ್ಇ)” ನ ಹೊಸ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ?

A
ಅನಿತ ಕಾರ್ವಾಲ್
B
ಶುಭ ಕಿರಣ್
C
ಡೇವಿಡ್ ಮ್ಯಾಥು
D
ಸುರೇಶ್ ಚಂದ್ರ
Question 2 Explanation: 
ಅನಿತ ಕಾರ್ವಾಲ್

ಗುಜರಾತ್-ಕೇಡರ್ ಐಎಎಸ್ ಅಧಿಕಾರಿ ಅನಿತಾ ಕಾರ್ವಾಲ್ ಅವರು ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ (ಸಿಬಿಎಸ್ಇ)ನ ನೂತನ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಪ್ರಸ್ತುತ, ಇವರು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಲ್ಲಿ ಹೆಚ್ಚುವರಿ ಕಾರ್ಯದರ್ಶಿ (ಮಾನವ ಸಂಪನ್ಮೂಲ) ಆಗಿದ್ದಾರೆ.

Question 3

3. ಬಾಂಡ್ಲಾ ವನ್ಯಜೀವಿ ಧಾಮ (Bondla Wildlife Sanctuary) ಯಾವ ರಾಜ್ಯದಲ್ಲಿದೆ?

A
ಗೋವಾ
B
ತಮಿಳುನಾಡು
C
ಗುಜರಾತ್
D
ಅಸ್ಸಾಂ
Question 3 Explanation: 
ಗೋವಾ
Question 4

4. ಈ ಕೆಳಗಿನ ಯಾವ ನಗರದಲ್ಲಿ ಬ್ರಿಕ್ಸ್-2017 ಶೃಂಗಸಭೆ ನಡೆಯಲಿದೆ?

A
ಮಾಸ್ಕೋ
B
ಬೀಜಿಂಗ್
C
ಕ್ಸಿಯಾಮೆನ್
D
ಬ್ರಸಿಲಿಯ
Question 4 Explanation: 
ಕ್ಸಿಯಾಮೆನ್

ಬ್ರಿಕ್ಸ್ ಶೃಂಗಸಭೆಯ 9ನೇ ಆವೃತ್ತಿ ಸೆಪ್ಟೆಂಬರ್ 3, 2017 ರಂದು ಪೂರ್ವ ಚೀನಾದ ಫುಜಿಯನ್ ಪ್ರಾಂತ್ಯದ ಕ್ಸಿಯಾಮೆನ್ ನಲ್ಲಿ ನಡೆಯಲಿದೆ. "BRICS: ಪ್ರಕಾಶಮಾನವಾದ ಮುಂದಿನ ಭವಿಷ್ಯಕ್ಕಾಗಿ ಬಲವಾದ ಪಾಲುದಾರಿಕೆ (“BRICS: Stronger Partnership for a Brighter Future”)" ಇದು ಈ ಶೃಂಗಸಭೆಯ ಧ್ಯೇಯವಾಕ್ಯ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಈ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.

Question 5

5. ಸಿಂಗಪುರದ ಹಂಗಾಮಿ ಅಧ್ಯಕ್ಷರಾಗಿ ಆಯ್ಕೆಯಾದ ಭಾರತೀಯ ಮೂಲದ ವ್ಯಕ್ತಿ ಯಾರು?

A
ಸೀತಾರಾಮನ್
B
ಜೆ. ವೈ. ಪಿಳೈ
C
ಕೆ. ಪಿ. ಶರ್ಮಾ
D
ಆರ್ ವಿ ಸಿಂಗ್
Question 5 Explanation: 
ಜೆ. ವೈ. ಪಿಳೈ

ಭಾರತೀಯ ಮೂಲದ ಜೆ.ಪಿ ಪಿಳ್ಳೈ ರವರು ಸಿಂಗಪುರದ ಹಂಗಾಮಿ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಅವರು ಟೋನಿ ಟಾನ್ ಕೆಂಗ್ ಯಾಮ್ ರವರ ಆರು ವರ್ಷಗಳ ಅಧಿಕಾರ ಅವಧಿ ಮುಕ್ತಾಯವಾದ ಹಿನ್ನಲೆಯಲ್ಲಿ ಪಿಳ್ಳೈ ರವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

Question 6

6. ಯುನೆಸ್ಕೋದ ಪ್ರತಿಷ್ಟಿತ ವಿಶ್ವ ಪರಂಪರೆ ನಗರಗಳ ಪಟ್ಟಿಗೆ ಸೇರ್ಪಡೆಗೊಂಡ ಭಾರತದ ಮೊದಲ ನಗರ ಎಂಬ ಕೀರ್ತಿಗೆ ಯಾವ ನಗರ ಭಾಜನವಾಗಿದೆ?

A
ಅಹ್ಮದಾಬಾದ್
B
ಹಂಪಿ
C
ಮೈಸೂರು
D
ಕೊಲ್ಕತ್ತ
Question 6 Explanation: 
ಅಹ್ಮದಾಬಾದ್

ಗುಜರಾತಿನ ಅಹ್ಮದಾಬಾದ್ ನಗರವನ್ನು ಪ್ರತಿಷ್ಟಿತ ವಿಶ್ವ ಪರಂಪರೆ ನಗರಗಳ ಪಟ್ಟಿಗೆ ಸೇರಿಸಲಾಗಿದ್ದು,ಈ ಪಟ್ಟಿಗೆ ಸೇರಿದ ಭಾರತದ ಮೊದಲ ನಗರ ಎಂಬ ಕೀರ್ತಿಗೆ ಅಹ್ಮದಾಬಾದ್ ಭಾಜನವಾಗಿದೆ. ಪೊಲ್ಯಾಂಡ್ ನ ಕಾರ್ಲೋದಲ್ಲಿ ನಡೆದ ಯುನೆಸ್ಕೋದ ವಿಶ್ವ ಪರಂಪರೆ ಸಮಿತಿ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ವಿಶ್ವ ಪರಂಪರೆ ನಗರಗಳ ಪಟ್ಟಿಯಲ್ಲಿ ಈಗಾಗಲೇ ಪ್ಯಾರಿಸ್, ವಿಯೆನ್ನಾ, ಕೈರೋ, ಬ್ರಸೆಲ್ಸ್, ರೋಮ್ ಮತ್ತು ಎಡಿನ್ಬರ್ಗ್ ನಗರಗಳಿದ್ದು, ಇದೀಗ ಗುಜರಾತ್ ನ ಐತಿಹಾಸಿಕ ಗೋಡೆ ನಗರಿ ಕೂಡ ಸೇರ್ಪಡೆಯಾಗುತ್ತಿರುವುದು ಭಾರತದ ಮಟ್ಟಿಗೆ ಹೆಮ್ಮೆಯ ಸಂಗತಿಯಾಗಿದೆ. ಇನ್ನು ನೇಪಾಳದ ಭಕ್ತಪುರ ಮತ್ತು ಶ್ರೀಲಂಕಾದ ಗಾಲೆ ಕೂಡ ವಿಶ್ವಪರಂಪರೆ ನಗರಗಳ ಪಟ್ಟಿಗೆ ಸೇರ್ಪಡೆಯಾಗಿದೆ.

Question 7

7. ಭಾರತದ ನೂತನ ರಕ್ಷಣಾ ಸಚಿವರಾಗಿ ನೇಮಕಗೊಂಡಿರುವ ನಿರ್ಮಲಾ ಸೀತಾರಾಮನ್ ರವರು ಯಾವ ರಾಜ್ಯದಿಂದ ರಾಜ್ಯಸಭೆಯನ್ನು ಪ್ರತಿನಿಧಿಸಿದ್ದಾರೆ?

A
ಮಧ್ಯ ಪ್ರದೇಶ
B
ಕರ್ನಾಟಕ
C
ತೆಲಂಗಣ
D
ತಮಿಳುನಾಡು
Question 7 Explanation: 
ಕರ್ನಾಟಕ

'ನಿರ್ಮಲಾ ಸೀತಾರಾಮನ್' ರವರು ಭಾರತದ ನೂತನ ರಕ್ಷಣಾ ಮಂತ್ರಿಯಾಗಿ ನೇಮಕಗೊಂಡಿದ್ದಾರೆ. ಸೀತಾರಾಮನ್ ರವರು ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಅವರು ಕರ್ನಾಟಕದಿಂದ ರಾಜ್ಯಸಭೆಗೆ ಚುನಾಯಿತರಾಗಿದ್ದಾರೆ. ಸೀತಾರಾಮನ್ ರವರು ದೇಶದ ಮೊದಲ ಮಹಿಳಾ ರಕ್ಷಣಾ ಸಚಿವರು.

Question 8

8. ಮಹೇಂದ್ರ ಸಿಂಗ್ ಧೋನಿ ರವರು 100 ಸ್ಟಂಪ್ ಮಾಡಿದ ವಿಶ್ವದ ಏಕೈಕ ಆಟಗಾರ ಎಂಬ ದಾಖಲೆ ಬರೆದರು. ಯಾವ ತಂಡದ ವಿರುದ್ದ ನಡೆದ ಪಂದ್ಯದಲ್ಲಿ ಈ ಸಾಧನೆ ಮಾಡಲಾಯಿತು?

A
ವೆಸ್ಟ್ ಇಂಡೀಸ್
B
ಇಂಗ್ಲೆಂಡ್
C
ಶ್ರೀಲಂಕಾ
D
ಆಸ್ಟ್ರೇಲಿಯಾ
Question 8 Explanation: 
ಶ್ರೀಲಂಕಾ

ಲಂಕಾ ವಿರುದ್ಧ ನಡೆದ ಕೊನೆ ಏಕದಿನ ಪಂದ್ಯದಲ್ಲಿ ಚಾಹಲ್ ಬೌಲಿಂಗ್ನಲ್ಲಿ ಅಕಿಲಾ ಧನಂಜಯ್ ಅವರ ವಿಕೆಟ್ ಸ್ಟಂಪಿಂಗ್ ಮಾಡುವ ಮೂಲಕ 100 ಸ್ಟಂಪ್ ಮಾಡಿದ ಏಕೈಕ ವಿಕೆಟ್ ಕೀಪರ್ ಎಂಬ ಖ್ಯಾತಿಗೆ ಎಂ. ಎಸ್. ಧೋನಿ ಪಾತ್ರರಾಗಿದ್ದಾರೆ.

Question 9

9. 2017 ಇಟಾಲಿಯನ್ ಫಾರ್ಮ್ಯುಲಾ ಒನ್ ಗ್ರ್ಯಾಂಡ್ ಪ್ರಿಕ್ಸ್ ಪಂದ್ಯಾವಳಿಯಲ್ಲಿ ಪ್ರಶಸ್ತಿಯನ್ನು ಗೆದ್ದವರು ಯಾರು?

A
ಸೆಬಾಸ್ಟಿಯನ್ ವೆಟಲ್
B
ಲೇವಿಸ್ ಹ್ಯಾಮಿಲ್ಟನ್
C
ಡೆನಿಯಲ್ ರಿಕ್ಕಿಯಾರ್ಡೊ
D
ನಿಕೊ ರೋಸ್ಬರ್ಗ್
Question 9 Explanation: 
ಲೇವಿಸ್ ಹ್ಯಾಮಿಲ್ಟನ್
Question 10

10. ಈ ಕೆಳಗಿನ ಯಾರು ಭಾರತಕ್ಕೆ ಅಮೆರಿಕ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ?

A
ಡೇವಿಡ್ ಸ್ಮಿತ್
B
ಕೆನ್ನೆತ್ ಜಸ್ಟರ್
C
ರಿಚರ್ಡ್ ವರ್ಮಾ
D
ಹ್ಯಾರೀಸ್ ಜೇಮ್ಸ್
Question 10 Explanation: 
ಕೆನ್ನೆತ್ ಜಸ್ಟರ್

ಕೆನ್ನೆತ್ ಐ ಜಸ್ಟರ್ ಭಾರತಕ್ಕೆ ಅಮೆರಿಕ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ. ಕೆನ್ನೆತ್ ರವರು ಶ್ವೇತಭವನದಲ್ಲಿ ನ್ಯಾಷನಲ್ ಇಕನಾಮಿಕ್ ಕೌನ್ಸಿಲ್ನ ಉಪನಿರ್ದೇಶಕರಾಗಿದ್ದಾರೆ. ಜನವರಿ 20, 2017 ರಿಂದ ಈ ಹುದ್ದೆ ತೆರವಾಗಿದೆ. ಜಸ್ಸರ್ ಭಾರತ-ಯುಎಸ್ ಸಂಬಂಧಗಳ ಬಲವಾದ ಬೆಂಬಲಿಗರಾಗಿದ್ದಾರೆ ಮತ್ತು ನಾಗರಿಕ ಪರಮಾಣು ಒಪ್ಪಂದದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

There are 10 questions to complete.

[button link=”http://www.karunaduexams.com/wp-content/uploads/2017/09/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಸೆಪ್ಟೆಂಬರ್-1-232017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ 

One Thought to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಸೆಪ್ಟೆಂಬರ್,1,2,3,2017”

Leave a Comment

This site uses Akismet to reduce spam. Learn how your comment data is processed.