ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಜುಲೈ,19,20,2017

Question 1

1. ಖಾಸಗಿತನ ಮೂಲಭೂತ ಹಕ್ಕು ಅಥವಾ ಅಲ್ಲವೇ ಎಂದು ನಿರ್ಧರಿಸಲು ರಚಿಸಲಾಗಿರುವ ಸುಪ್ರೀಂಕೋರ್ಟಿನ ಒಂಬತ್ತು ನ್ಯಾಯಾಧೀಶರ ಸಂವಿಧಾನ ಪೀಠದ ಮುಖ್ಯಸ್ಥರು ಯಾರು?

A
ಜೆ ಎಸ್ ಖೇಹರ್
B
ಅಭಯ್ ಮನೋಹರ್ ಸಪ್ರೆ
C
ಸಂಜಯ್ ಕಿಶನ್ ಕೌಲ್
D
ಫಾಲಿ ನಾರಿಮನ್
Question 1 Explanation: 
ಜೆ ಎಸ್ ಖೇಹರ್

ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಾಧೀಶರಾದ ಜೆ.ಎಸ್. ಖೇಹರ್ ಅವರ ನೇತೃತ್ವದ ಸುಪ್ರೀಂ ಕೋರ್ಟಿನ (ಎಸ್ಸಿ) 9-ನ್ಯಾಯಾಧೀಶರ ಸಂವಿಧಾನದ ಪೀಠವು ಖಾಸಗಿತನ ಹಕ್ಕನ್ನು ಸಂವಿಧಾನದ ಅಡಿ ಮೂಲಭೂತ ಹಕ್ಕು ಅಥವಾ ಅಲ್ಲವೇ ಎಂದು ನಿರ್ಧರಿಸಲಿದೆ. ನ್ಯಾಯಮೂರ್ತಿಗಳಾದ ಜೆ ಚೆಲೇಮಶ್ವರ್, ಎಸ್. ಎ ಬಾಬಡೆ, ಆರ್ ಕೆ ಅಗ್ರವಾಲ್, ರೋಹಿಂಟನ್ ಫಾಲಿ ನರಿಮನ್, ಅಭಯ್ ಮನೋಹರ್ ಸಪ್ರೆ, ಡಿ ವೈ ಚಂದ್ರಚೂಡ್, ಸಂಜಯ್ ಕಿಶನ್ ಕೌಲ್ ಮತ್ತು ಎಸ್ ಅಬ್ದುಲ್ ನಝೀರ್ ಸೇರಿದಂತೆ ಒಂಬತ್ತು ನ್ಯಾಯಾಧೀಶರನ್ನು ಈ ಪೀಠ ಒಳಗೊಂಡಿದೆ.

Question 2

2. ನಾಗಲ್ಯಾಂಡಿನ ನೂತನ ಮುಖ್ಯಮಂತ್ರಿಯಾಗಿ ಈ ಕೆಳಗಿನ ಯಾರು ಪ್ರಮಾಣ ವಚನ ಸ್ವೀಕರಿಸಿದರು?

A
ವಿಝೋಲ್ ಅಂಗಮಿ
B
ಟಿ ಆರ್ ಝೆಲಿಯಾಂಗ್
C
ಹೊಕಿಶೆ ಶಿಮಾ
D
ಶಿರೋಬಿ ಥೋಪ
Question 2 Explanation: 
ಟಿ ಆರ್ ಝೆಲಿಯಾಂಗ್

ನಾಗಲ್ಯಾಂಡಿನ ನೂತನ ಮುಖ್ಯಮಂತ್ರಿಯಾಗಿ ಟಿ ಆರ್ ಝೆಲಿಯಾಂಗ್ ಪ್ರಮಾಣ ವಚನ ಸ್ವೀಕರಿಸಿದರು. ಅನಿರೀಕ್ಷಿತ ರಾಜಕೀಯ ಬೆಳವಣಿಗೆಯಲ್ಲಿ ಶುರ್ಹೋಲ್ಜೀ ಲೈಝೆಟ್ಸು ರಾಜೀನಾಮೆ ನೀಡಿದ ಕಾರಣ ನೂತನ ಮುಖ್ಯಮಂತ್ರಿಯಾಗಿ ಟಿ.ಆರ್. ಝೆಲಿಯಾಂಗ್ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

Question 3

3. ನವಜಾತ ಶಿಶುಗಳಲ್ಲಿ ಹುಟ್ಟಿನಿಂದಲೇ ಉಂಟಾಗುವ ಶ್ರವಣ ದೋಷವನ್ನು ಪತ್ತೆಹಚ್ಚಲು ಭಾರತ ಸರ್ಕಾರವು (ಗೋಯಿ) ಈ ಕೆಳಗಿನ ಯಾವ ಕಡಿಮೆ ವೆಚ್ಚದ ಸ್ಕ್ರೀನಿಂಗ್ ಸಾಧನವನ್ನು ಪ್ರಾರಂಭಿಸಿದೆ?

A
ಸೋಹಮ್
B
ಸೋಬಾರ್ನ್
C
ಶ್ರವಣ್
D
ಸೋಚನ್
Question 3 Explanation: 
ಸೋಹಮ್

ನವಜಾತ ಶಿಶುಗಳಲ್ಲಿ ಹುಟ್ಟಿನಿಂದಲೇ ಇರುವ ಶ್ರವಣದೋಷವನ್ನು ಪತ್ತೆಹಚ್ಚಲು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ (S & T) ನವದೆಹಲಿಯಲ್ಲಿ ಕಡಿಮೆ ವೆಚ್ಚದ ಸ್ಥಳೀಯ ಸ್ಕ್ರೀನಿಂಗ್ ಸಾಧನ "ಸೊಹಮ್ (Sohum)" ಅನ್ನು ಪ್ರಾರಂಭಿಸಿದೆ. ಈ ಸಾಧನವನ್ನು ಸ್ಕೂಲ್ ಆಫ್ ಇಂಟರ್ನ್ಯಾಷನಲ್ ಬಯೋಡೆನ್ಸಿನ್ (SIB) ಸ್ಟಾರ್ಟ್ ಆಫ್ M/s ಸೊಹಮ್ ಇನ್ನೋವೇಶನ್ ಲ್ಯಾಬ್ಸ್ ಇಂಡಿಯಾ ಪ್ರೈವೇಟ್ ಅಭಿವೃದ್ಧಿಪಡಿಸಿದೆ. ಲಿಮಿಟೆಡ್.

Question 4

4. ಭಾರತ ಸರ್ಕಾರದ ಸಂಸ್ಕೃತಿ ಇಲಾಖೆಯ ಫೆಲೋಷಿಪ್ ಅನ್ನು ಈ ಕೆಳಗಿನ ಯಾರಿಗೆ ನೀಡಲಾಗಿದೆ?

A
ಯಾಸ್ಮಿನ್ ಸಿಂಗ್
B
ನಂದಕಿಶೋರ್ ಕಪೋಟ್
C
ಬಿರ್ಜು ಮಹಾರಾಜ್
D
ರಾಜನ್ ಸಿಂಗ್
Question 4 Explanation: 
ನಂದಕಿಶೋರ್ ಕಪೊಟೆ

ಅಂತಾರಾಷ್ಟ್ರೀಯ ಖ್ಯಾತಿ ಪಡೆದಿರುವ ಹಿರಿಯ ಕಥಕ್ ಕಲಾವಿದ ಡಾ. ಪಂಡಿತ್ ನಂದಕಿಶೋರ್ ಕಪೋಟ್ ಇತ್ತೀಚೆಗೆ ಭಾರತ ಸರ್ಕಾರ (ಗೋಯಿ) ಸಂಸ್ಕೃತಿ ಇಲಾಖೆಯಿಂದ ಫೆಲೋಷಿಪ್ ಗೌರವ ಪಡೆದಿದ್ದಾರೆ. ಈ ಗೌರವವನ್ನು ಪಡೆದ ದೇಶದ ಮೊದಲ ಹಿರಿಯ ಪುರುಷ ಕಥಕ್ ಕಲಾವಿದ ಕಪೋಟ್.

Question 5

5. ಫೋರ್ಬ್ಸ್ ಮಿಡಲ್ ಈಸ್ಟ್ ವರದಿಯ ಪ್ರಕಾರ, 2017 ಸರ್ಕಾರದ ಅತ್ಯಂತ ಶಕ್ತಿಶಾಲಿ ಅರಬ್ ಮಹಿಳೆಯರ ಸಮೀಕ್ಷೆಯಲ್ಲಿ ಯಾರು ಅಗ್ರಸ್ಥಾನ ಪಡೆದಿದ್ದಾರೆ?

A
ಹಿಂದ್ ಸುಬೈ ಬರಾಕ್ ಅಲ್-ಸುಬೈ
B
ಶೇಖಾ ಲುಬ್ನಾ ಅಲ್ ಖಸಿಮಿ
C
ಇಮಾನ್ ಹೌಡಾ ಫೆರಾನ್
D
ಶಭೀನಾ ಫಾತಿಮಾ
Question 5 Explanation: 
ಶೇಖಾ ಲುಬ್ನಾ ಅಲ್ ಖಸಿಮಿ

ಯುನೈಟೆಡ್ ಅರಬ್ ಎಮಿರೇಟ್ಸಿನ ಸಹಿಷ್ಣುತೆ ಖಾತೆ ಸಚಿವೆ ಶೇಖಾ ಲುಬ್ನಾ ಅಲ್ ಖಸಿಮಿ ರವರು ಫೋರ್ಬ್ಸ್ ಮಿಡಲ್ ಈಸ್ಟ್ ವರದಿಯ ಪ್ರಕಾರ, 2017 ಸರ್ಕಾರದ ಅತ್ಯಂತ ಶಕ್ತಿಶಾಲಿ ಅರಬ್ ಮಹಿಳೆಯರ ಸಮೀಕ್ಷೆಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದಾರೆ.

Question 6

6. ಈ ಕೆಳಗಿನ ಯಾರಿಗೆ ಲೋಕಸಭಾ ಸದಸ್ಯರಾಗಿ ನೀಡಿದ ಕೊಡುಗೆಗಾಗಿ ಜೀವಮಾನ ಸಾಧನೆ (ಎಲ್ಟಿಎ) ಪ್ರಶಸ್ತಿಯನ್ನು ನೀಡಲಾಗಿದೆ?

A
ಎಲ್ ಕೆ ಅಡ್ವಾಣಿ
B
ಜೈರಾಮ್ ರಮೇಶ್
C
ಮಲ್ಲಿಕಾರ್ಜುನ ಖರ್ಗೆ
D
ಮುರಳಿ ಮನೋಹರ್ ಜೋಶಿ
Question 6 Explanation: 
ಎಲ್ ಕೆ ಅಡ್ವಾಣಿ

ಬಿಜೆಪಿ ನಾಯಕ ಎಲ್.ಕೆ.ಆಡ್ವಾಣಿ ಅವರು ಲೋಕಸಭೆಯಲ್ಲಿ ಸಂಸತ್ ಸದಸ್ಯರಾಗಿ ನೀಡಿದ ಕೊಡುಗೆಗಳಿಗಾಗಿ ಜೀವಮಾನ ಸಾಧನೆ (ಎಲ್ಟಿಎ) ಪ್ರಶಸ್ತಿಯನ್ನು ಪಡೆದಿದ್ದಾರೆ. ಜೆಡಿ (ಯು) ನಾಯಕ ಶರದ್ ಯಾದವ್ ಅವರು ರಾಜ್ಯಸಭಾ ಸಂಸದರಾಗಿ ಜೀವಮಾನ ಸಾಧನೆ ಪ್ರಶಸ್ತಿಯನ್ನು ಪಡೆದಿದ್ದಾರೆ. ಲೋಕಮಾತ್ ಮೀಡಿಯಾ ಗ್ರೂಪ್ ಆಯೋಜಿಸಿದ್ದ ಸಮಾರಂಭದಲ್ಲಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ರವರು ಈ ಪ್ರಶಸ್ತಿಯನ್ನು ನೀಡಿದರು. ಪ್ರಶಸ್ತಿ ಪಡೆದ ಇತರ ಸದಸ್ಯರೆಂದರೆ ರೆವಲ್ಯೂಶನರಿ ಸೋಷಿಯಲಿಸ್ಟ್ ಪಾರ್ಟಿ MP ಎನ್.ಕೆ. ಪ್ರಮಾಚಂದ್ರನ್ (ಅತ್ಯುತ್ತಮ ಸಂಸದ), ಕಾಂಗ್ರೆಸ್ ನಾಯಕ ಕುಮಾರಿ ಸುಶ್ಮಿತಾ ದೇವ್ (ಅತ್ಯುತ್ತಮ ಮಹಿಳಾ ಸಂಸತ್ ಸದಸ್ಯೆ) ಮತ್ತು ಬಿಜೆಪಿ ನಾಯಕ ಮೀನಾಕ್ಷಿ ಲೆಖಿ (ಅತ್ಯುತ್ತಮ ಡೆಬಟ್ ವುಮನ್ ಸಂಸತ್ ಸದಸ್ಯೆ).

Question 7

7. ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸಲು ಯಾವ ರಾಜ್ಯದ ಸರ್ಕಾರ "ಜನಹಿತಾ" ಅನ್ನು ಪ್ರಾರಂಭಿಸಿದೆ?

A
ತೆಲಂಗಣ
B
ಕರ್ನಾಟಕ
C
ಆಂಧ್ರ ಪ್ರದೇಶ
D
ಮಧ್ಯ ಪ್ರದೇಶ
Question 7 Explanation: 
ತೆಲಂಗಣ

ವಿಶೇಷ ಪೋರ್ಟಲ್ ಮೂಲಕ ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸಲು ತೆಲಂಗಾಣ ಸರ್ಕಾರವು "ಜನಹಿತಾ" ಎಂಬ ನವೀನ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಈ ಯೋಜನೆಯು ಸೂರ್ಯಪೇಟ್ ಜಿಲ್ಲೆಯಲ್ಲಿ ಪ್ರಾಯೋಗಿಕ ಆಧಾರದ ಮೇಲೆ ಪ್ರಾರಂಭವಾಗಿದೆ ಮತ್ತು ರಾಜ್ಯದಾದ್ಯಂತ ಕ್ರಮೇಣ ಜಾರಿಗೊಳಿಸಲಾಗುವುದು. ಜನರು ದೂರುಗಳನ್ನು ಸಲ್ಲಿಸಲು ಅನುಕೂಲವಾಗುವಂತೆ ಮಾಡುವುದು ಮತ್ತು ತ್ವರಿತ ಪರಿಹಾರವನ್ನು ಪಡೆಯುವುದು ಕಾರ್ಯಕ್ರಮದ ಗುರಿ.

Question 8

8. ಕೇಂದ್ರ ಸರ್ಕಾರವು NAFCCಯಡಿ ಈ ಕೆಳಗಿನ ಯಾವ ಮೂರು ರಾಜ್ಯಗಳಲ್ಲಿ ಹವಾಮಾನ ಬದಲಾವಣೆ ಯೋಜನೆಗಳನ್ನು ಅನುಮೋದನೆ ನೀಡಿದೆ?

A
ಕರ್ನಾಟಕ, ಗುಜರಾತ್, ಮಣಿಪುರ
B
ರಾಜಸ್ತಾನ, ಗುಜರಾತ್, ಸಿಕ್ಕಿಂ
C
ತೆಲಂಗಣ, ಗೋವಾ, ಮಹಾರಾಷ್ಟ್ರ
D
ಮಹಾರಾಷ್ಟ್ರ, ಕೇರಳ, ಮಧ್ಯ ಪ್ರದೇಶ
Question 8 Explanation: 
ರಾಜಸ್ತಾನ, ಗುಜರಾತ್, ಸಿಕ್ಕಿಂ

ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆಯ ಕೇಂದ್ರ ಸಚಿವಾಲಯ ಇತ್ತೀಚೆಗೆ ರಾಜಸ್ಥಾನ, ಗುಜರಾತ್ ಮತ್ತು ಸಿಕ್ಕಿಂ ಸಲ್ಲಿಸಿದ ಹವಾಮಾನ ರೂಪಾಂತರ ಯೋಜನೆಗಳ ಪ್ರಸ್ತಾವನೆಯನ್ನು ಅನುಮೋದಿಸಿದೆ. MoEF &CCM ಕಾರ್ಯದರ್ಶಿ ಅಜಯ್ ನಾರಾಯಣ್ ಝಾ ಅವರ ನೇತೃತ್ವದ ನ್ಯಾಷನಲ್ ಸ್ಟೀರಿಂಗ್ ಕಮಿಟಿ ಆನ್ ಕ್ಲೈಮೇಟ್ ಚೇಂಜ್ (ಎನ್ಎಸ್ಸಿಸಿ ಸಿ) ಅನುಮೋದಿಸಿದ ಮೂರು ಯೋಜನೆಗಳು ಹವಾಮಾನ ನ್ಯಾಷನಲ್ ಅಡ್ಪಟೇಷನ್ ಫಂಡ್ ಫಾರ್ ಕ್ಲೈಮೆಟ್ ಚೇಂಜ್ (NAFCC) ಅಡಿಯಲ್ಲಿ ಹಣವನ್ನು ಪಡೆಯಲಿವೆ.

Question 9

9. ಏಷ್ಯಾ ಅಭಿವೃದ್ದಿ ಬ್ಯಾಂಕ್ (ಎಡಿಬಿ) ಹೊರನೋಟ 2017 ಪ್ರಕಾರ, 2017 ರಲ್ಲಿ ಭಾರತದ ಅಂದಾಜು ಬೆಳವಣಿಗೆ ದರ ಎಷ್ಟಿರಲಿದೆ?

A
7.3%
B
7.4%
C
6.9%
D
8.0%
Question 9 Explanation: 
7.4%

ಏಷ್ಯಾ ಅಭಿವೃದ್ದಿ ಬ್ಯಾಂಕ್ (ಎಡಿಬಿ) ಹೊರನೋಟ 2017 ವರದಿಯ ಪ್ರಕಾರ, 2017 ರಲ್ಲಿ ಭಾರತವು 7.4% ನಷ್ಟು ಬೆಳವಣಿಗೆ ದರವನ್ನು ಮತ್ತು 2018 ರಲ್ಲಿ 7.6% ರಷ್ಟನ್ನು ಸಾಧಿಸಲಿದೆ.

Question 10

10. ಒಡಿಶಾದ ಅತಿದೊಡ್ಡ ರಸ್ತೆ ಸೇತುವೆ "ನೇತಾಜಿ ಸುಭಾಷ್ ಚಂದ್ರ ಬೋಸ್"ಸೇತುವೆಯನ್ನು ಮಹಾನದಿಯ ಯಾವ ಉಪನದಿ ಮೇಲೆ ನಿರ್ಮಿಸಲಾಗಿದೆ?

A
ಕಮೆಂಗ್ ನದಿ
B
ಮಾನಸ ನದಿ
C
ಕಥಜೋಡಿ ನದಿ
D
ಸುಬನ್ಸಿರಿ ನದಿ
Question 10 Explanation: 
ಕಥಜೋಡಿ ನದಿ

ಒಡಿಶಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ರವರು ಇತ್ತೀಚೆಗೆ ರಾಜ್ಯದ ಉದ್ದದ ರಸ್ತೆ ಸೇತುವೆ "ನೇತಾಜಿ ಸುಭಾಷ್ ಚಂದ್ರ ಬೋಸ್ ಸೇತು" ವನ್ನು ದೇಶಕ್ಕೆ ಸಮರ್ಪಿಸಿದ್ದಾರೆ. 2.88 ಕಿ.ಮೀ. ಸೇತುವೆಯನ್ನು ಕಥಜೋಡಿ ನದಿಯ (ಮಹಾನಡಿ ಉಪನದಿ) ನದಿಯ ಮೇಲೆ ನಿರ್ಮಿಸಲಾಗಿದೆ. ಅಂದಾಜು ವೆಚ್ಚ 114 ಕೋಟಿ. ನೆತಾಜಿ ಸೇತುವೆ ಭುವನೇಶ್ವರ್ ಮತ್ತು ಕಟಕ್ ನಡುವಿನ ಅಂತರವನ್ನು ಕೇವಲ 12 ಕಿ.ಮೀ.ಗಳಷ್ಟು ಕಡಿಮೆಗೊಳಿಸುವುದಲ್ಲದೆ ಟ್ರಾಫಿಕ್ ಸಮಸ್ಯೆಯಿಲ್ಲದೆ ಪ್ರಯಾಣವನ್ನು ಸುಲಭಗೊಳಿಸಲು ಸಹಾಯ ಮಾಡುತ್ತದೆ.

There are 10 questions to complete.

[button link=”http://www.karunaduexams.com/wp-content/uploads/2017/08/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಜುಲೈ19202017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ 

Leave a Comment

This site uses Akismet to reduce spam. Learn how your comment data is processed.