ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಅಕ್ಟೋಬರ್,13,14,15,2017

Question 1

1. ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (ಯುನೆಸ್ಕೋ)ದ ನೂತನ ಡೈರೆಕ್ಟರ್ ಜನರಲ್ ಆಗಿ ಯಾರು ನೇಮಕಗೊಂಡಿದ್ದಾರೆ?

A
ಜತಿನ್ ಕ್ವಾರ್ಲೆ
B
ಆಡ್ರೆ ಅಝೌಲೆ
C
ಹೆನ್ರಿ ಕೆನ್ಲೆತ್
D
ಡೇವಿಡ್ ಜೂರಿಚ್
Question 1 Explanation: 
ಆಡ್ರೆ ಅಝೌಲೆ

ಫ್ರೆಂಚ್ ನಾಗರಿಕ ಸೇವಕ ಮತ್ತು ರಾಜಕಾರಣಿ ಆಡ್ರೆ ಅಜೌಲೆ ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (ಯುನೆಸ್ಕೋ) ಹೊಸ ಡೈರೆಕ್ಟರ್-ಜನರಲ್ (ಡಿಜಿ) ಆಗಿ ಆಯ್ಕೆಯಾಗಿದ್ದಾರೆ.

Question 2

2. ಈ ಕೆಳಗಿನ ಯಾರಿಗೆ ರಾಷ್ಟ್ರೀಯ ಭಾವೈಕ್ಯತೆಗೆ 2015-16ನೇ ಸಾಲಿನ ಇಂದಿರಾ ಗಾಂಧಿ ಪ್ರಶಸ್ತಿ ಲಭಿಸಿದೆ?

A
ಅಡೂರ್ ಗೋಪಾಲಕೃಷ್ಣ
B
ಟಿ ಎಂ ಕೃಷ್ಣ
C
ರಾಹುಲ್ ದ್ರಾವಿಡ್
D
ಜೂಲನ್ ಗೋಸ್ವಾಮಿ
Question 2 Explanation: 
ಟಿ ಎಂ ಕೃಷ್ಣ

ಖ್ಯಾತ ಕರ್ನಾಟಕ ಸಂಗೀತಗಾರ ಟಿ.ಎಮ್.ಕೃಷ್ಣ ಅವರಿಗೆ ರಾಷ್ಟ್ರೀಯ ಭಾವೈಕ್ಯತೆಗೆ 2015-16ನೇ ಸಾಲಿನ ಇಂದಿರಾ ಗಾಂಧಿ ಪ್ರಶಸ್ತಿ ಲಭಿಸಿದೆ. ಸಂಸ್ಕೃತಿಯಲ್ಲಿ ಸಾಮಾಜಿಕ ಅಂತರ್ಗತೆಗೆ ಕೆಲಸ ಮಾಡಿದ್ದಕ್ಕಾಗಿ ಟಿ.ಎಂ.ಕೃಷ್ಣ ಅವರು ಈ ಹಿಂದೆ ಮ್ಯಾಗ್ಸೆಸೆ ಪ್ರಶಸ್ತಿ ಗಳಿಸಿದ್ದರು.

Question 3

3. ಯಾವ ದಿನದಂದು ಅಂತಾರಾಷ್ಟ್ರೀಯ ಗ್ರಾಮೀಣ ಮಹಿಳೆಯರ ದಿನವನ್ನು ಆಚರಿಸಲಾಗುತ್ತದೆ?

A
ಅಕ್ಟೋಬರ್ 13
B
ಅಕ್ಟೋಬರ್ 14
C
ಅಕ್ಟೋಬರ್ 15
D
ಅಕ್ಟೋಬರ್ 16
Question 3 Explanation: 
ಅಕ್ಟೋಬರ್ 15

ಗ್ರಾಮೀಣ ಕುಟುಂಬಗಳು ಮತ್ತು ಸಮುದಾಯಗಳ ಸಮರ್ಥನೀಯತೆ, ಗ್ರಾಮೀಣ ಜೀವನೋಪಾಯ ಸುಧಾರಿಸುವಲ್ಲಿ ಮಹಿಳೆಯರ ನಿರ್ಣಾಯಕ ಪಾತ್ರವನ್ನು ಗುರುತಿಸಲು ಪ್ರತಿ ವರ್ಷ ಅಕ್ಟೋಬರ್ 15 ರಂದು ಗ್ರಾಮೀಣ ಮಹಿಳೆಯರ ಅಂತಾರಾಷ್ಟ್ರೀಯ ದಿನವನ್ನು ಆಚರಿಸಲಾಗುತ್ತದೆ. "2017 ಥೀಮ್" “Challenges and opportunities in climate-resilient agriculture for gender equality and the empowerment of rural women and girls”.

Question 4

4. ಈ ಕೆಳಗಿನ ಯಾವುದು ಮ್ಯಾನ್ಮರ್ ನಲ್ಲಿ ಲೂಬ್ರಿಕಂಟ್ಸ್ ಮಾರಾಟ ಪ್ರಾರಂಭಿಸಿದ ಮೊದಲ ಇಂಡಿಯನ್ ಆಯಿಲ್ ಮಾರ್ಕೆಟಿಂಗ್ ಕಂಪನಿ (ಒಎಂಸಿ) ಆಗಿದೆ?

A
BPCL
B
HPCL
C
GAIL
D
ONGC
Question 4 Explanation: 
HPCL

ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್ (ಎಚ್ಪಿಸಿಎಲ್) ಮ್ಯಾನ್ಮಾರ್ ನಲ್ಲಿ ಲೂಬ್ರಿಕಂಟ್ಸ್ ಮಾರಾಟ ಪ್ರಾರಂಭಿಸಿದ ಭಾರತದ ಮೊದಲ ಆಯಿಲ್ ಮಾರ್ಕೆಟಿಂಗ್ ಕಂಪೆನಿ (ಒಎಂಸಿ) ಎನಿಸಿದೆ. ಇದಕ್ಕಾಗಿ ಯಾಂಗೊನ್ ಮತ್ತು ಮ್ಯಾಂಡಲೆ ವಾಣಿಜ್ಯ ಕೇಂದ್ರಗಳನ್ನು ಪ್ರಾರಂಭಿಸಿದೆ.

Question 5

5. ಚೀನಾದ ಭಾರತದ ಹೊಸ ರಾಯಭಾರಿಯಾಗಿ ಈ ಕೆಳಗಿನ ಯಾರು ನೇಮಕಗೊಂಡಿದ್ದಾರೆ?

A
ಗೌತಮ್ ಬಾಂಬವಾಲೆ
B
ಜಾಧವ್ ಸಿಂಗ್
C
ರಾಮ್ ಪ್ರಸಾದ್
D
ಚರಣ್ ಸಿಂಗ್
Question 5 Explanation: 
ಗೌತಮ್ ಬಾಂಬವಾಲೆ
Question 6

6. ವಿಶ್ವದ ಅತಿ ದೊಡ್ಡ ದಹನ ಸಂಶೋಧನಾ ಕೇಂದ್ರ (Combustion Research Centre)ವನ್ನು ಯಾವ ಐಐಟಿ ಸಂಸ್ಥೆಯಲ್ಲಿ ಸ್ಥಾಪಿಸಲಾಗಿದೆ?

A
ಐಐಟಿ ರೂರ್ಕಿ
B
ಐಐಟಿ ಮದ್ರಾಸ್
C
ಐಐಟಿ ಬಾಂಬೆ
D
ಐಐಟಿ ದೆಹಲಿ
Question 6 Explanation: 
ಐಐಟಿ ಮದ್ರಾಸ್

ತಮಿಳುನಾಡಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್ (ಐಐಟಿ-ಎಮ್) ನಲ್ಲಿ ನ್ಯಾಷನಲ್ ಸೆಂಟರ್ ಫಾರ್ ಕಂಬಶ್ಚನ್ ರಿಸರ್ಚ್ ಆ್ಯಂಡ್ ಡೆವಲಪ್ಮೆಂಟ್ (ಎನ್.ಸಿ.ಸಿ.ಆರ್.ಡಿ) ಅನ್ನು ಉದ್ಘಾಟಿಸಲಾಯಿತು. ಇದು ವಿಶ್ವದಲ್ಲೇ ಅತಿ ದೊಡ್ಡ ದಹನ ಸಂಶೋಧನಾ ಕೇಂದ್ರವಾಗಿದೆ. ಎನ್.ಸಿ.ಸಿ.ಆರ್.ಡಿ. ಒಟ್ಟು 90 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾಗಿದೆ.

Question 7

7. ಯಾವ ಭಾರತೀಯ ಸಶಸ್ತ್ರ ಪಡೆ ನವೀನ ಮೊಬೈಲ್ ಆರೋಗ್ಯ ಅಪ್ಲಿಕೇಶನ್ "ಮೆಡ್ವಾಚ್ (MedWatch)" ಅನ್ನು ಪ್ರಾರಂಭಿಸಿದೆ?

A
ಭಾರತೀಯ ಸೇನೆ
B
ಭಾರತೀಯ ವಾಯು ಪಡೆ
C
ಗಡಿ ಭದ್ರತಾ ಪಡೆ
D
ಭಾರತೀಯ ನೌಕ ಪಡೆ
Question 7 Explanation: 
ಭಾರತೀಯ ವಾಯು ಪಡೆ

ಭಾರತೀಯ ಏರ್ ಫೋರ್ಸ್ (ಐಎಎಫ್) ಹೊಸದಿಲ್ಲಿಯಲ್ಲಿ ಎಲ್ಲಾ ಐಎಎಫ್ ಸಿಬ್ಬಂದಿಗಳಿಗೆ ಅಧಿಕೃತ ಆರೋಗ್ಯ ಮಾಹಿತಿಯನ್ನು ಒದಗಿಸುವ ನವೀನ ಮೊಬೈಲ್ ಆರೋಗ್ಯ ಅಪ್ಲಿಕೇಶನ್ 'ಮೆಡ್ವಾಚ್' ಅನ್ನು ಪ್ರಾರಂಭಿಸಿದೆ.

Question 8

8. ಇಂಗಾಲದ ಡೈ ಆಕ್ಸೈಡ್ ಅನ್ನು ಕಲ್ಲಾಗಿ ಪರಿವರ್ತಿಸುವ ವಿಶ್ವದ ಮೊದಲ ಶೂನ್ಯ ಹೊರಸೂಸುವಿಕೆ ಘಟಕ ಯಾವ ದೇಶದಲ್ಲಿ ಆರಂಭಗೊಂಡಿದೆ?

A
ಚೀನಾ
B
ಆಸ್ಟ್ರೇಲಿಯಾ
C
ಐಸ್ಲ್ಯಾಂಡ್
D
ಫ್ರಾನ್ಸ್
Question 8 Explanation: 
ಐಸ್ಲ್ಯಾಂಡ್
Question 9
9. ಮ್ಯಾನ್ಮಾರ್ ಈ ಕೆಳಗಿನ ಯಾವ ರಾಷ್ಟ್ರದೊಂದಿಗೆ ಅಂತಾರಾಷ್ಟ್ರೀಯ ಗಡಿಯನ್ನು ಹೊಂದಿಲ್ಲ?
A
ಲಾವೊಸ್
B
ಭಾರತ
C
ಚೀನಾ
D
ವಿಯೆಟ್ನಾಂ
Question 9 Explanation: 
ವಿಯೆಟ್ನಾಂ ಮ್ಯಾನ್ಮಾರ್ ಉತ್ತರಕ್ಕೆ ಚೀನಾಮತ್ತು ಈಶಾನ್ಯ ಲಾವೋಸ್, ಪೂರ್ವಕ್ಕೆ ಥೈಲ್ಯಾಂಡ್ ಮತ್ತು ಆಗ್ನೇಯ, ವಾಯುವ್ಯಕ್ಕೆ ಭಾರತ, ಪಶ್ಚಿಮಕ್ಕೆ ಬಾಂಗ್ಲಾದೇಶ ಮತ್ತು ದಕ್ಷಿಣಕ್ಕೆ ಅಂಡಮಾನ್ ಸಮುದ್ರವನ್ನು ಹೊಂದಿದೆ.

Question 10

10. ಈ ವರೆಗೆ ಭಾರತದ ಎಷ್ಟು ರಾಷ್ಟ್ರಪತಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ?

A
ಎರಡು
B
ಮೂರು
C
ನಾಲ್ಕು
D
ಐದು
Question 10 Explanation: 
ಎರಡು ಭಾರತದ ಮೊದಲ ರಾಷ್ಟ್ರಪತಿ ಡಾ ರಾಜೇಂದ್ರ ಪ್ರಸಾದ್ ಮತ್ತು ನೀಲಂ ಸಂಜೀವ್ ರೆಡ್ಡಿ ರವರು ಅವಿರೋಧವಾಗಿ ಆಯ್ಕೆಯಾದ ರಾಷ್ಟ್ರಪತಿಗಳು. ರಾಜೇಂಧ್ರ ಪ್ರಸಾದ್ ರವರು 1950-52ರಲ್ಲಿ ಅವಿರೋಧವಾಗಿ ಆಯ್ಕೆಯಾದರು. ಆದರೆ ಮುಂದಿನ ಚುನಾವಣೆಯಲ್ಲಿ ಅವರು ವಿರೋಧವನ್ನು ಎದುರಿಸಿದರು.

There are 10 questions to complete.

[button link=”http://www.karunaduexams.com/wp-content/uploads/2017/10/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಅಕ್ಟೋಬರ್1314152017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ 

9 Thoughts to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಅಕ್ಟೋಬರ್,13,14,15,2017”

  1. Girishbabu.b

    Very useful for rural students

  2. Sathish Roy

    Super very useful for everyone

  3. ningappa

    sir…its helful thanku

  4. Kumar.g. Bakkai

    It’s unique site in kannada

  5. Mani

    Very nice ..it’s very use full

  6. venkatesh

    Very nic sir

Leave a Reply to prakash Cancel reply

This site uses Akismet to reduce spam. Learn how your comment data is processed.