ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ, ವಿಜ್ಞಾನ-ತಂತ್ರಜ್ಞಾನ, ಪರಿಸರ, ವ್ಯವಹಾರ, ಕ್ರೀಡೆ, ಪ್ರಶಸ್ತಿಗಳು, ಸುದ್ದಿಯಲ್ಲಿರುವ ವ್ಯಕ್ತಿಗಳ ಕುರಿತಾದ ಪ್ರಚಲಿತ ಘಟನೆಗಳ ಮತ್ತು ಸಾಮಾನ್ಯ ಜ್ಞಾನದ ವಸ್ತುನಿಷ್ಟ ಪ್ರಶ್ನೋತ್ತರಗಳು.

ಕ್ವೀಜ್ 35

Question 1

1. ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ನಡುವೆ ಇರುವ ಪ್ರಮುಖ ಸಂಪರ್ಕ ಎಂದು ಈ ಕೆಳಕಂಡ ಯಾವ ಕಾಲುವೆಯನ್ನು ಪರಿಗಣಿಸಲಾಗಿದೆ?

A
ಸೂಯೆಜ್ ಕಾಲುವೆ
B
ಕೀಲ್ ಕಾಲುವೆ
C
ಪನಾಮ ಕಾಲುವೆ
D
ಗ್ರಾಂಡ್ ಕಾಲುವೆ
Question 1 Explanation: 
ಸೂಯೆಜ್ ಕಾಲುವೆ
Question 2

2. ಈ ಕೆಳಗಿನವುಗಳಲ್ಲಿ ಯಾವುದು ಭಾರತದ ಪ್ರಮುಖ ಪೆಟ್ರೊಕೆಮಿಕಲ್ ಕೇಂದ್ರವಲ್ಲ?

A
ಕೋಯಲಿ
B
ಜಾಮ್ ನಗರ
C
ರೂರ್ಕೆಲ
D
ಮಂಗಳೂರು
Question 2 Explanation: 
ರೂರ್ಕೆಲ
Question 3

3. "ದಕ್ಷಿಣದಿಂದ ಉತ್ತರಕ್ಕೆ" ಸಂಚರಿಸುವಾಗ ಭಾರತದ ಸಮುದ್ರ ಬಂದರುಗಳ ಸರಿಯಾದ ಅನುಕ್ರಮ ಯಾವುದು?

A
ಕೊಚ್ಚಿ-ತಿರುವನಂತಪುರ-ಕ್ಯಾಲಿಕಟ್-ಮಂಗಳೂರು
B
ತಿರುವನಂತಪುರ-ಕೊಚ್ಚಿ-ಕ್ಯಾಲಿಕಟ್-ಮಂಗಳೂರು
C
ತಿರುವನಂತಪುರ-ಕೊಚ್ಚಿ-ಮಂಗಳೂರು-ಕ್ಯಾಲಿಕಟ್
D
ಕ್ಯಾಲಿಕಟ್-ತಿರುವನಂತಪುರ-ಮಂಗಳೂರು-ಕೊಚ್ಚಿ
Question 3 Explanation: 
ತಿರುವನಂತಪುರ-ಕೊಚ್ಚಿ-ಕ್ಯಾಲಿಕಟ್-ಮಂಗಳೂರು
Question 4

4. ಭಾರತದ ಪ್ರಧಾನ ಮಂತ್ರಿ ರವರು ಈ ಕೆಳಗಿನ ಯಾವ ಸಂದರ್ಭದಲ್ಲಿ ತಮ್ಮ ಸರ್ಕಾರದ ವಿರುದ್ದ ಮಂಡಿಸಲಾದ ಅವಿಶ್ವಾಸ ನಿರ್ಣಯದಲ್ಲಿ ಭಾಗವಹಿಸುವಂತಿಲ್ಲ?

A
ಅವರು ರಾಜ್ಯಸಭಾ ಸದಸ್ಯರಾಗಿದ್ದಲ್ಲಿ
B
ಅವರು ಲೋಕಸಭಾ ಸದಸ್ಯರಾಗಿದ್ದಲ್ಲಿ
C
ಸಮ್ಮಿಶ್ರ ಸರ್ಕಾರವನ್ನು ನಡೆಸುತ್ತದಲ್ಲಿ
D
ಲೋಕಸಭೆಯ ಸ್ಪೀಕರ್ ರವರು ನಿಷೇಧಿಸಿದ್ದಲ್ಲಿ
Question 4 Explanation: 
ಅವರು ರಾಜ್ಯಸಭಾ ಸದಸ್ಯರಾಗಿದ್ದಲ್ಲಿ

ಪ್ರಧಾನ ಮಂತ್ರಿರವರು ರಾಜ್ಯಸಭೆಯ ಸದಸ್ಯರಾಗಿದ್ದರೆ, ಅವರು ಎರಡೂ ಸದನಗಳ ಕಾರ್ಯವಿಧಾನಗಳಲ್ಲಿ ಭಾಗವಹಿಸಬಹುದು ಆದರೆ ರಾಜ್ಯಸಭೆಯಲ್ಲಿ ಮಾತ್ರ ಮತ ಚಲಾಯಿಸಬಹುದು. ಅವಿಶ್ವಾಸ ನಿರ್ಣಯವನ್ನು ಲೋಕಸಭೆಯಲ್ಲಿ ಮಾತ್ರ ಮಂಡಿಸತಕ್ಕದ್ದು ಆದ್ದರಿಂದ ಪ್ರಧಾನಿ ಲೋಕಸಭೆಯಲ್ಲಿ ಮತ ಚಲಾಯಿಸುವಂತಿಲ್ಲ.

Question 5

5. ಪ್ರಸ್ತುತ ಅಸ್ತಿತ್ವದಲ್ಲಿರುವ ಈ ಕೆಳಗಿನ ಯಾವ ರಾಜ್ಯ ವಿಜಯನಗರ ಸಾಮಾರ್ಜ್ಯದ ದೊರೆ ಶ್ರೀಕೃಷ್ಣದೇವ ರಾಯ ನಿಯಂತ್ರಣಕ್ಕೆ ಒಳಪಟ್ಟಿರಲ್ಲಿಲ್ಲ?

A
ಕರ್ನಾಟಕ
B
ಕೇರಳ
C
ಮಹಾರಾಷ್ಟ್ರ
D
ಒಡಿಶಾ
Question 5 Explanation: 
ಮಹಾರಾಷ್ಟ್ರ

ವಿಜಯನಗರ ಸಾಮ್ರಾಜ್ಯದ ಅಪ್ರತಿಮ ದೊರೆ ಕೃಷ್ಣದೇವ ರಾಯ (1509-1529) ಒಬ್ಬ ರಾಜನೀತಿಜ್ಞ, ಉತ್ತಮ ಆಡಳಿತಗಾರ ಮತ್ತು ಕಲೆಗಳ ಪೋಷಕರಾಗಿದ್ದರು. ಆಧುನಿಕ ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಒಡಿಶಾದ ಕೆಲವು ಭಾಗಗಳನ್ನು ತನ್ನ ನಿಯಂತ್ರಣದಲ್ಲಿ ತರುವ ಮೂಲಕ ದಕ್ಷಿಣ ಭಾರತವನ್ನು ಒಟ್ಟುಗೂಡಿಸಿದ ಕೀರ್ತಿ ಶ್ರೀಕೃಷ್ಣದೇವರಾಯ ಅವರಿಗೆ ಸಲ್ಲುತ್ತದೆ.

Question 6

6. ಮಾನವನ ರಕ್ತದಲ್ಲಿರುವ ಹಿಮೋಗ್ಲೋಬಿನ್ ಯಾವ ಅನಿಲಕ್ಕೆ ಹೆಚ್ಚಿನ ಆಕರ್ಷಣೆಯನ್ನು ಹೊಂದಿರುತ್ತದೆ?

A
ಇಂಗಾಲದ ಡೈ ಆಕ್ಸೈಡ್
B
ಆಮ್ಲಜನಕ
C
ಕಾರ್ಬನ್ ಮಾನಕ್ಸೈಡ್
D
ನೈಟ್ರಸ್ ಆಕ್ಸೈಡ್
Question 6 Explanation: 
ಕಾರ್ಬನ್ ಮಾನಕ್ಸೈಡ್
Question 7

7. ಭಾರತದಲ್ಲಿ ಮಾವಿನ ಕಾಯಿಗಳನ್ನು ಮಾಗಿಸಲು ಅತ್ಯಂತ ಸಾಮಾನ್ಯವಾಗಿ ಬಳಸುವ ರಾಸಾಯನಿಕ ಯಾವುದು?

A
ಪೋಟಾಷಿಯಂ ಐಯೋಡೈಡ್
B
ಸಿಲ್ವರ್ ಐಯೋಡೈಡ್
C
ಕ್ಯಾಲ್ಸಿಯಂ ಕಾರ್ಬೈಡ್
D
ಅಮೋನಿಯಂ ನೈಟ್ರೈಟ್
Question 7 Explanation: 
ಕ್ಯಾಲ್ಸಿಯಂ ಕಾರ್ಬೈಡ್

ಭಾರತದಲ್ಲಿ ಮಾವಿನ ಕಾಯಿಗಳನ್ನು ಮಾಗಿಸಲು ಕ್ಯಾಲ್ಸಿಯಂ ಕಾರ್ಬೈಡ್ ಅತ್ಯಂತ ಸಾಮಾನ್ಯವಾಗಿ ಬಳಸುವ ರಾಸಾಯನಿಕವಾಗಿದೆ.

Question 8

8. ಸಾಂಪ್ರದಾಯಿಕ ಜವಳಿ ಫ್ಯಾಬ್ರಿಕ್ “ಶಾಫಿ ಲಾಂಪಿ (Shaphee Lanphee)” ಯಾವ ರಾಜ್ಯದ ಜಿಐ ಹೆಗ್ಗುರುತ ಪಡೆದಿರುವ ಉತ್ಪನ್ನವಾಗಿದೆ?

A
ಅಸ್ಸಾಂ
B
ಮಣಿಪುರ
C
ತ್ರಿಪುರ
D
ಅರುಣಾಚಲ ಪ್ರದೇಶ
Question 8 Explanation: 
ಮಣಿಪುರ

ಶಾಫಿ ಲಾಂಪಿ ಮಣಿಪುರದ ಮೈತೆಯಿ ಮಹಿಳೆಯರಿಂದ ನೇಯ್ದ ಮತ್ತು ಅಲಂಕರಿಸಲ್ಪಟ್ಟ ಒಂದು ಸಾಂಪ್ರದಾಯಿಕ ಜವಳಿ ಬಟ್ಟೆ. ಈ ವಸ್ತ್ರವು ಹಿಂದೆ, ವಿಜಯದ ಉಡುಗೊರೆಯಾಗಿ (ಮನಾ ಪೀ) ಯುದ್ಧದಲ್ಲಿ ಯಶಸ್ವಿಯ ಸಂಕೇತವಾಗಿ ಸೈನಿಕರಿಗೆ ನೀಡಲಾಗತಿತ್ತು.

Question 9

9. “ರೌತ್ ನಾಚಾ” ಯಾವ ರಾಜ್ಯದ ಬುಡಕಟ್ಟು ಜನಾಂಗದವರ ಪ್ರಮುಖ ಜಾನಪದ ನೃತ್ಯವಾಗಿದೆ?

A
ಚತ್ತೀಸಘರ್
B
ಆಂಧ್ರ ಪ್ರದೇಶ
C
ಸಿಕ್ಕಿಂ
D
ಕೇರಳ
Question 9 Explanation: 
ಚತ್ತೀಸಘರ್

ರೌತ್ ನಾಚಾ ಚತ್ತೀಸಘರ್ ಬುಡಕಟ್ಟು ಜನಾಂಗದವರ ಪ್ರಮುಖ ಔಪಚಾರಿಕ ನೃತ್ಯವಾಗಿದೆ. ದೀಪಾವಳಿ ಹಬ್ಬದ ನಂತರ "ದೇವ್ ಉದ್ನಿ ಎಕಾದಾಶಿ" ನಲ್ಲಿ ಇದನ್ನು ನಡೆಸಲಾಗುತ್ತದೆ. ಇದನ್ನು ಮುಖ್ಯವಾಗಿ ಯದುವಾನ್ಷಿಗಳು ನಡೆಸುತ್ತಾರೆ.

Question 10

10. ಕರ್ನಾಟಿಕ್ ಹಿಂದೂಸ್ತಾನಿ ಸಂಗೀತದಲ್ಲಿ ಬಳಸಲಾಗುವ ಬೊಬ್ಬಿಲಿ ವೀಣಾ ಅಥವಾ ಸರಸ್ವತಿ ವೀಣೆ ಅಥವಾ ಏಕಾಂಡ ವೀಣೆಯನ್ನು ಕೆಳಗಿನ ಯಾವ ಮರಗಳಿಂದ ತಯಾರಿಸಲಾಗುತ್ತದೆ?

A
ಶ್ರೀಗಂಧ
B
ಜಾಕ್ ವುಡ್
C
ರೋಸ್ ವುಡ್
D
ಬಿದಿರು
Question 10 Explanation: 
ಜಾಕ್ ವುಡ್
There are 10 questions to complete.

[button link=”http://www.karunaduexams.com/wp-content/uploads/2017/10/ಕ್ವೀಜ್-35.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

12 Thoughts to “ಸಾಮಾನ್ಯ ಜ್ಞಾನ ಕ್ವೀಜ್ 35”

  1. Premkumar Kolkar

    Nice Web. very helpfull for poor and job person

    Please SDA question upload day by day.

  2. Venkatesha.s

    Very useful to competitive students

  3. Chethan Nayaka S V

    Very very usefull

  4. shivaraj

    Better information for competitors

  5. devaraj

    very useful work in kannada language.thank u every karunadu exams .com team.

  6. -Koushik

    Thank you sooo much …it’s very help full for competitive aspirants …I am great full to you for designing this web ….from kowshi

  7. bharati

    very usefull

Leave a Comment

This site uses Akismet to reduce spam. Learn how your comment data is processed.