ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಮಾರ್ಚ್,11,12,2017

Question 1

1. ‘ವಿಶ್ವ ಸೈಬರ್ ಸೆನ್ಸರ್ ಷಿಪ್ ವಿರೋಧಿ ದಿನ’ ವನ್ನು ಯಾವ ದಿನದಂದು ಆಚರಿಸಲಾಗುತ್ತದೆ?

A
ಮಾರ್ಚ್ 10
B
ಮಾರ್ಚ್ 11
C
ಮಾರ್ಚ್ 12
D
ಮಾರ್ಚ್ 13
Question 1 Explanation: 
ಮಾರ್ಚ್ 12
Question 2

2. ಸಂತೋಷ್ ಟ್ರೋಫಿ ಫುಟ್ ಬಾಲ್ ಟೂರ್ನಮೆಂಟ್-2017 ನಲ್ಲಿ ಚಾಂಪಿಯನ್ನಾಗಿ ಹೊರಹೊಮ್ಮಿದ ಭಾರತದ ತಂಡ ಯಾವುದು?

A
ಪಂಜಾಬ್
B
ಬಂಗಾಳ
C
ರೈಲ್ವೇಸ್
D
ಮುಂಬೈ
Question 2 Explanation: 
ಪಂಜಾಬ್
Question 3

3. ಗಡಿ ಸಂರಕ್ಷಣೆ ಬಗ್ಗೆ ಅಧ್ಯಯನ ನಡೆಸಲು ಕೇಂದ್ರ ಸರ್ಕಾರಕ್ಕೆ ಯಾವ ಸಮಿತಿಯನ್ನು ರಚಿಸಿತ್ತು?

A
ಎಸ್.ಜೆ.ಠಾಕೂರ್ ಸಮಿತಿ
B
ಜೆ.ಜೆ. ಚಟರ್ಜಿ ಸಮಿತಿ
C
ನಾಗೇಂದ್ರ ಸಮಿತಿ
D
ಮಧುಕರ್ ಗುಪ್ತ ಸಮಿತಿ
Question 3 Explanation: 
ಮಧುಕರ್ ಗುಪ್ತ ಸಮಿತಿ

ಭಾರತ-ಪಾಕಿಸ್ತಾನ ದೇಶದ ಗಡಿಯಲ್ಲಿ ಸುರಕ್ಷತೆ ಹೆಚ್ಚಿಸಲು ಮತ್ತು ಪ್ರಸ್ಥಾವಿತ ತಂತಿ ಬೇಲಿಯ ಸಾಧಕ-ಬಾಧಕಗಳನ್ನು ಅಧ್ಯಯನ ನಡೆಸಲು ಕೇಂದ್ರ ಸರ್ಕಾರ ಮಧುಕರ್ ಗುಪ್ತ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿತ್ತು. ಸದ್ಯ ಈ ಸಮಿತಿ ತನ್ನ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದೆ. ಗಡಿ ಸಂರಕ್ಷಣೆಯಲ್ಲಿ ಮೂಲಭೂತ ಸೌಕರ್ಯ, ತಾಂತ್ರಿಕ ಮತ್ತು ಆಡಳಿತಾತ್ಮಕ ಸಮಸ್ಯಗಳು, ಗಡಿಯಲ್ಲಿ ಸೈನ್ಯದ ಜಮಾವಣೆ ಮತ್ತು ಗಡಿ ರಕ್ಷಣೆಯಲ್ಲಿ ಉದ್ಭವವಾಗುವಂತ ಸಮಸ್ಯಗಳ ಬಗ್ಗೆ ಸಮಿತಿ ದೀರ್ಘವಾದ ವರದಿ ನೀಡಿದೆ.

Question 4

4. ಉದ್ಯೋಗದಲ್ಲಿ ಆರೋಗ್ಯ ಮತ್ತು ರಕ್ಷಣೆ ಬಗ್ಗೆ “ಅಂತರರಾಷ್ಟ್ರೀಯ ವಿಷನ್ ಜೀರೋ” ಸಮ್ಮೇಳನವನ್ನು ಯಾವ ನಗರದಲ್ಲಿ ಆಯೋಜಿಸಲಾಗಿತ್ತು?

A
ಬೆಂಗಳೂರು
B
ದೆಹಲಿ
C
ಗಾಂಧಿನಗರ
D
ಪುಣೆ
Question 4 Explanation: 
ದೆಹಲಿ

ಉದ್ಯೋಗದಲ್ಲಿ ಆರೋಗ್ಯ ಮತ್ತು ರಕ್ಷಣೆ ಬಗ್ಗೆ “ಅಂತರರಾಷ್ಟ್ರೀಯ ವಿಷನ್ ಜೀರೋ” ಸಮ್ಮೇಳನವನ್ನು ದೆಹಲಿಯಲ್ಲಿ ಆಯೋಜಿಸಲಾಗಿತ್ತು. ಉದ್ಯೋಗದ ಸ್ಥಳದಲ್ಲಿ ಆರೋಗ್ಯ ಮತ್ತು ರಕ್ಷಣೆ ಉತ್ತೇಜಿಸುವ ಸಲುವಾಗಿ ಈ ಸಮ್ಮೇಳನದಲ್ಲಿ ಮಾಹಿತಿ ವಿನಿಮಯ ಮತ್ತು ಅನುಭವ ಹಂಚಿಕೊಳ್ಳಲು ವೇದಿಕೆಯಾಗಿದೆ.

Question 5

5. ಮಹಿಳೆಯರ ಸುರಕ್ಷತೆಗಾಗಿ “ಅಮ್ಮಾವಿನ್ ಆರನ್” (Ammavin Aran) ಎಂಬ ರಕ್ಷಣಾ ಆ್ಯಪ್ ನ್ನು ಯಾವ ರಾಜ್ಯ ಸರ್ಕಾರ ಪ್ರಾರಂಭಿಸಿದೆ?

A
ಕೇರಳ
B
ತಮಿಳುನಾಡು
C
ಮಹಾರಾಷ್ಟ್ರ
D
ಗುಜರಾತ್
Question 5 Explanation: 
ತಮಿಳುನಾಡು

ತಮಿಳುನಾಡಿನ ಎಐಎಡಿಎಂಕೆ ಯ ಮಾಹಿತಿ ತಂತ್ರಜ್ಞಾನ ಅಂಗ ಸಂಸ್ಥೆ ಮಹಿಳೆಯರ ಸುರಕ್ಷತೆಗಾಗಿ “ಅಮ್ಮಾವಿನ್ ಆರನ್” (Ammavin Aran) ಎಂಬ ರಕ್ಷಣಾ ಆ್ಯಪ್ ನ್ನು ಪ್ರಾರಂಭಿಸಿದೆ. ಈ ಆ್ಯಪ್ ನಲ್ಲಿ ಬಳಕೆದಾರರಿಗೆ ಹತ್ತಿರದ ಆರಕ್ಷಕ ಠಾಣೆಯ ಮತ್ತು ಆಸ್ಪತ್ರೆ ದೂರವಾಣಿ ಸಂಖ್ಯೆ ಮತ್ತು ಭೂಪಟದ ಮಾಹಿತಿ ನೀಡುತ್ತದೆ. ಯಾವುದೇ ಅಹಿತಕರ ಸನ್ನಿವೇಶದಲ್ಲಿ ದೊಡ್ಡದಾದ ಶಬ್ಧ ಮಾಡುವ ವ್ಯವಸ್ಥೆಯನ್ನು ಈ ಆ್ಯಪ್ ನಲ್ಲಿ ಕಲ್ಪಿಸಲಾಗಿದೆ.

Question 6

6. ಮಹಿಳಾ ಉದ್ಯಮಿಗಳಿಗೆ ಬಂಡವಾಳ ಒದಗಿಸುವ ಸಲುವಾಗಿ Idea2POC ಎಂಬ ಅನುದಾನ ವ್ಯವಸ್ಥೆಯನ್ನು ಕಲ್ಪಿಸಿದ ರಾಜ್ಯ ಯಾವುದು?

A
ಗುಜರಾತ್
B
ಮಹಾರಾಷ್ಟ್ರ
C
ರಾಜಸ್ತಾನ
D
ಕರ್ನಾಟಕ
Question 6 Explanation: 
ಕರ್ನಾಟಕ

ಮಹಿಳಾ ಉದ್ಯಮಿಗಳಿಗೆ ಬಂಡವಾಳ ಒದಗಿಸುವ ಸಲುವಾಗಿ ರೂ. 10 ಕೋಟಿಯ Idea2POC ಎಂಬ ಅನುದಾನ ವ್ಯವಸ್ಥೆಯನ್ನು ಕರ್ನಾಟಕ ರಾಜ್ಯ ಸರ್ಕಾರ ಪ್ರಾರಂಭಿಸಿದೆ. ಈ ಯೋಜನೆಯಡಿ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ, ಬಯೋಟೆಕ್ನಾಲಜಿ ಮತ್ತು ವಿಜ್ಞಾನ-ತಂತ್ರಜ್ಞಾನ ಇಲಾಖೆ ರೂ. 50 ಲಕ್ಷದವರೆಗೆ ಹೊಸ ಅನ್ವೇಷಣೆ ಕೈಗೊಳ್ಳುವ ಮಹಿಳಾ ಉದ್ಯಮಿಗಳಿಗೆ ಅನುದಾನ ಒದಗಿಸಲಿದೆ.

Question 7

7. ಗ್ರಾಮೀಣ ಬಡ ಜನರಿಗಾಗಿ “ಆದರ್ಶ್ ಗ್ರಾಮ ಯೋಜನೆ” ಯನ್ನು ಯಾವ ರಾಜ್ಯ ಸರ್ಕಾರ ಪ್ರಾರಂಭಿಸಿದೆ?

A
ಅರುಣಾಚಲ ಪ್ರದೇಶ
B
ಕರ್ನಾಟಕ
C
ಉತ್ತರ ಪ್ರದೇಶ
D
ಒಡಿಸ್ಸಾ
Question 7 Explanation: 
ಅರುಣಾಚಲ ಪ್ರದೇಶ

ಅರುಣಾಚಲ ಪ್ರದೇಶ ರಾಜ್ಯ ಸರ್ಕಾರ ಗ್ರಾಮೀಣ ಬಡ ಜನರಿಗಾಗಿ “ಆದರ್ಶ್ ಗ್ರಾಮ ಯೋಜನೆ” ಎಂಬ ಹೊಸ ಯೋಜನೆಯನ್ನು ಪ್ರಾರಂಭಿಸಿದೆ. ತನ್ನ ರಾಜ್ಯದ ಗ್ರಾಮೀಣ ಭಾಗದ ಬಡ ಜನರ ಕಲ್ಯಾಣ ಈ ಯೋಜನೆಯ ಮೂಲ ಉದ್ದೇಶ. 2017-18 ರಲ್ಲಿ ಸುಮಾರು 123 ಗ್ರಾಮಗಳನ್ನು ಆದರ್ಶ ಗ್ರಾಮಗಳನ್ನಾಗಿ ಪರಿವರ್ತಿಸುವುದು ಈ ಯೋಜನೆಯ ಧ್ಯೇಯವಾಗಿದೆ. ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ, ಉದ್ಯೋಗ ಅವಕಾಶ ಮತ್ತು ಸಮುದಾಯ ಆಸ್ತಿ ನಿರ್ಮಾಣ ಮಾಡುವುದಕ್ಕಾಗಿ ಸುಮಾರು ರೂ. 93 ಕೋಟಿಗಳನ್ನು ಮೀಸಲಿರಿಸಿದೆ.

Question 8

8. ದೇಶದಲ್ಲಿ ಬ್ಲೂ ರೆವಲ್ಯೂಷನ್ ಸಾಧಿಸುವುದಕ್ಕಾಗಿ ಕೇಂದ್ರ ಕೃಷಿ ಸಚಿವಾಲಯ ಯಾವ ಕಾರ್ಯಕ್ರಮವನ್ನು ಪ್ರಾರಂಭಿಸಿದೆ?

A
ಮಿಷನ್ ಬ್ಲೂ ಲೈಫ್
B
ಮಿಷನ್ ಫಿಂಗರ್ ಲಿಂಗ್
C
ಓಷನ್ ಫಿಂಗರ್ ಲಿಂಗ್
D
ನ್ಯಾಷನಲ್ ಬ್ಲೂ ಲೈಫ್
Question 8 Explanation: 
ಮಿಷನ್ ಫಿಂಗರ್ ಲಿಂಗ್
Question 9

9. ಕೆಳಗಿನ ಹೇಳಿಕೆಗಳನ್ನು ಗಮನಿಸಿ:

1 ಕರ್ನಾಟಕ ಸರ್ಕಾರ “ನಮ್ಮ (ಇಂದಿರಾ) ಕ್ಯಾಂಟೀನ್“ನ್ನು ರಾಜ್ಯದೆಲ್ಲೆಡೆ ಪ್ರಾರಂಭಿಸಲಿದೆ.

2 ತಮಿಳುನಾಡು ಸರ್ಕಾರ “ಅಮ್ಮಾ ಕ್ಯಾಂಟೀನ್” ನ್ನು ರಾಜ್ಯದೆಲ್ಲೆಡೆ ಪ್ರಾರಂಭಿಸಿದೆ

A
ಹೇಳಿಕೆ 1 ಮಾತ್ರ ಸರಿಯಾಗಿದೆ
B
ಹೇಳಿಕೆ 2 ಮಾತ್ರ ಸರಿಯಾಗಿದೆ
C
ಹೇಳಿಕೆ 1 ಮತ್ತು 2 ಸರಿಯಾಗಿದೆ
D
ಹೇಳಿಕೆ 1 ಮತ್ತು 2 ತಪ್ಪಾಗಿದೆ
Question 9 Explanation: 
ಹೇಳಿಕೆ 1 ಮತ್ತು 2 ಸರಿಯಾಗಿದೆ
Question 10

10. “Crime and Criminal Tracking Network & Systems (CCTNS)” ನೊಂದಿಗೆ ಸಂಪರ್ಕ ಹೊಂದಿದ ಭಾರತದ ಪ್ರಪ್ರಥಮ ಪೊಲೀಸ್ ಠಾಣೆ ಯಾವ ನಗರದಲ್ಲಿದೆ?

A
ಬೆಂಗಳೂರು
B
ಹೈದರಾಬಾದ್
C
ಶಿಮ್ಲಾ
D
ಮುಂಬೈ
Question 10 Explanation: 
ಶಿಮ್ಲಾ

ಹಿಮಾಚಲ ಪ್ರದೇಶದ ಶಿಮ್ಲಾ ನಗರದ ಸಂಜೋಲಿ ಪೊಲೀಸ್ ಠಾಣೆ ದೇಶವ್ಯಾಪಿ ಆನ್ ಲೈನ್ ವ್ಯವಸ್ಥೆಯಾದ “Crime and Criminal Tracking Network & Systems (CCTNS)” ನೊಂದಿಗೆ ಸಂಪರ್ಕ ಹೊಂದಿದ ಭಾರತದ ಪ್ರಪ್ರಥಮ ಪೊಲೀಸ್ ಠಾಣೆಯಾಗಿದೆ. ಈ ವ್ಯವಸ್ಥೆಯಡಿ ಸಾರ್ವಜನಿಕರು ಆನ್ ಲೈನ್/ಆಫ್ ಲೈನ್ ಮುಖೇನ ದೂರು ದಾಖಲಿಸಲು, ಉದ್ಯೋಗಾಕಾಂಕ್ಷಿಗಳ ಪೊಲೀಸ್ ಸತ್ಯಾಪನೆ ಮಾಡಲು, ಬಾಡಿಗೆದಾರರ ನಡವಳಿ ಪ್ರಮಾಣಪತ್ರ ಪಡೆಯಲು ಬಳಸಬಹುದಾಗಿದೆ.

There are 10 questions to complete.

[button link=”http://www.karunaduexams.com/wp-content/uploads/2017/04/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಮಾರ್ಚ್11122017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ 

Leave a Comment

This site uses Akismet to reduce spam. Learn how your comment data is processed.