ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಫೆಬ್ರವರಿ ,17,18,2017

Question 1

1. ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆ ಯಾವ ರಾಕೆಟ್ ಮೂಲಕ 104 ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿ ದಾಖಲೆ ಬರೆಯಿತು?

A
ಪಿಎಸ್ಎಲ್ ವಿ-ಸಿ 37
B
ಪಿಎಸ್ಎಲ್ ವಿ-ಸಿ 38
C
ಪಿಎಸ್ಎಲ್ ವಿ-ಸಿ 40
D
ಪಿಎಸ್ಎಲ್ ವಿ-ಸಿ 36
Question 1 Explanation: 
ಪಿಎಸ್ಎಲ್ ವಿ-ಸಿ 37

ಒಂದೇ ರಾಕೆಟ್ ನಿಂದ 104 ಉಪಗ್ರಹಗಳನ್ನು ಉಡಾವಣೆ ಮಾಡುವ ಮೂಲಕ ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ ಇಂದು ಐತಿಹಾಸಿಕ ಸಾಧನೆ ಮಾಡಿದೆ. ಆಂಧ್ರಪ್ರದೇಶದ ಶ್ರೀಹರಿ ಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬೆಳಗ್ಗೆ 9.28ರ ಹೊತ್ತಿಗೆ 104ಉಪಗ್ರಹಗಳನ್ನು ಹೊತ್ತು ಪಿಎಸ್ಎಲ್ ವಿ -ಸಿ37ರಾಕೆಟ್ ನಭಕ್ಕೆ ಹಾರಿದೆ. 104 ಉಪಗ್ರಹಗಳ ಪೈಕಿ ಭಾರತದ ಕಾರ್ಟೋಸ್ಯಾಟ್-2, ಐಎನ್ಎಸ್-1ಎ ಹಾಗೂ ಐಎನ್ಎಸ್-1ಬಿ ಸೇರಿದಂತೆ ಮೂರು ಉಪಗ್ರಹಗಳು. ಅಮೆರಿಕದ 88 ಚಿಕ್ಕ ಉಪಗ್ರಹ(ಕ್ಯೂಬ್ಸ್ಯಾಟ್)ಗಳು ಕಕ್ಷೆ ಸೇರಿದೆ. ಅಮೆರಿಕ, ಜರ್ಮನಿ, ಇಸ್ರೇಲ್, ಯುಎಇ, ಹಾಲೆಂಡ್, ಬೆಲ್ಜಿಯಂ ಸೇರಿದಂತೆ ವಿದೇಶದ 101 ವಾಣಿಜ್ಯ ಉದ್ದೇಶಿತ ಉಪಗ್ರಹಗಳು ಒಳಗೊಂಡಿವೆ.

Question 2

2. 2017 ಭಾರತೀಯ ಪನೋರಮಾ ಸಿನಿಮಾ ಉತ್ಸವ ಯಾವ ನಗರದಲ್ಲಿ ನಡೆಯಲಿದೆ?

A
ಪೋರ್ಟ್ ಬ್ಲೇರ್
B
ಪಣಜಿ
C
ಕಲ್ಕತ್ತಾ
D
ಪುಣೆ
Question 2 Explanation: 
ಪೋರ್ಟ್ ಬ್ಲೇರ್

ಅಂಡಮಾನಿನ ಪೋರ್ಟ್ ಬ್ಲೇರ್ ನಲ್ಲಿ 2017 ಭಾರತೀಯ ಪನೋರಮಾ ಸಿನಿಮಾ ಉತ್ಸವ ಫೆಬ್ರವರಿ 15 ರಿಂದ ಆರಂಭಗೊಂಡಿದೆ. ಐದು ದಿನಗಳ ಕಾಲ ಈ ಸಿನಿಮೋತ್ಸವ ನಡೆಯಲಿದೆ. ವಿವಿಧ ಭಾಷೆಯ 15ಕ್ಕೂ ಹೆಚ್ಚು ಜನಪ್ರಿಯ ಸಿನಿಮಾಗಳನ್ನು ಪ್ರದರ್ಶಿಸಲಾಗುವುದು.

Question 3

3. ಗಣಿಗಾರಿಕೆಯಲ್ಲಿ ಪಾರದರ್ಶಕತೆಯನ್ನು ತರುವ ಸಲುವಾಗಿ ಕೇಂದ್ರ ಸರ್ಕಾರ ಯಾವ ಪೋರ್ಟಲ್ ಅನ್ನು ಜಾರಿಗೆ ತಂದಿದೆ?

A
Tamra
B
Taboo
C
Tani
D
Tanra
Question 3 Explanation: 
Tamra

ಗಣಿಗಾರಿಕೆಯಲ್ಲಿ ಪಾರದರ್ಶಕತೆಯನ್ನು ಕಾಪಾಡುವ ಸಲುವಾಗಿ ಕೇಂದ್ರ ಸರ್ಕಾರ TAMRA ಹೆಸರಿನ ಮೊಬೈಲ್ ಅಪ್ಲಿಕೇಷನ್ ಹಾಗೂ ಪೋರ್ಟಲ್ ಅನ್ನು ಜಾರಿಗೆ ತಂದಿದೆ. TAMRA ಎಂದರೆ Transparency Auction Monitoring and Resource Augmentation.

Question 4

4. 2017 ಕಾಯಕಲ್ಪ ಪ್ರಶಸ್ತಿಯಡಿ ನೈರ್ಮಲ್ಯ ಹಾಗೂ ಸ್ವಚ್ಚತೆ ವಿಭಾಗದಡಿ ಮೊದಲ ಪ್ರಶಸ್ತಿಯನ್ನು ಪಡೆದುಕೊಂಡ ಭಾರತೀಯ ಆರೋಗ್ಯ ಸಂಸ್ಥೆ ಯಾವುದು?

A
AIIMS, ನವ ದೆಹಲಿ
B
NIMANS, ಬೆಂಗಳೂರು
C
NITRD, ನವ ದೆಹಲಿ
D
PGIMER, ಚಂಡೀಗರ್
Question 4 Explanation: 
AIIMS, ನವ ದೆಹಲಿ

ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್, ನವದೆಹಲಿ 2017 ಕಾಯಕಲ್ಪ ಪ್ರಶಸ್ತಿಯಡಿ ನೈರ್ಮಲ್ಯ ಹಾಗೂ ಸ್ವಚ್ಚತೆ ವಿಭಾಗದಡಿ ಮೊದಲ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಪ್ರಶಸ್ತಿಯು ರೂ 5 ಕೋಟಿ ನಗದು ಬಹುಮಾನವನ್ನು ಒಳಗೊಂಡಿದೆ. ನೈಮರ್ಲ್ಯ ಹಾಗೂ ಸ್ವಚ್ಚತೆಯ ನಿರ್ವಹಣೆಗಾಗಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

Question 5

5. ಇತ್ತೀಚೆಗೆ ನಿಧನರಾದ “ಟಿ ವಿ ಪರಶುರಾಮ್” ಯಾವ ಕ್ಷೇತ್ರಕ್ಕೆ ಸಂಬಂಧಿಸಿದ್ದಾರೆ?

A
ಸಿನಿಮಾ
B
ವಿಜ್ಞಾನ
C
ಪತ್ರಿಕೋದ್ಯಮ
D
ಕಲೆ
Question 5 Explanation: 
ಪತ್ರಿಕೋದ್ಯಮ

ಹಿರಿಯ ಪತ್ರಕರ್ತ ಟಿ ವಿ ಪರಶುರಾಮ್ ಅಮೆರಿಕದಲ್ಲಿ ನಿಧನರಾದರು. ಪರಶುರಾಮ್ ಅವರು ವಿಶ್ವಸಂಸ್ಥೆಯಲ್ಲಿ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾದ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿದ್ದರು. ಪರಶುರಾಮ್ ಅವರು ವಿವಿಧ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದರು. ಪತ್ರಕರ್ತನಲ್ಲದೇ ಪುಸ್ತಕಗಳನ್ನು ಸಹ ಬರೆದಿದ್ದಾರೆ.

Question 6

6. ಈ ಕೆಳಗಿನ ಯಾವ ಅಂತಾರಾಷ್ಟ್ರೀಯ ಸಂಸ್ಥೆ ಭಾರತದಲ್ಲಿ ಇತ್ತೀಚೆಗೆ “South Asia Regional Training and Technical Assistance Center (SARTTAC)” ಕೇಂದ್ರವನ್ನು ಸ್ಥಾಪಿಸಿದೆ?

A
ಅಂತಾರಾಷ್ಟ್ರೀಯ ಹಣಕಾಸು ನಿಧಿ
B
ವಿಶ್ವಸಂಸ್ಥೆ
C
ಐರೋಪ್ಯ ಒಕ್ಕೂಟ
D
ಏಷ್ಯಾ ಅಭಿವೃದ್ದಿ ಬ್ಯಾಂಕ್
Question 6 Explanation: 
ಅಂತಾರಾಷ್ಟ್ರೀಯ ಹಣಕಾಸು ನಿಧಿ

ಅಂತಾರಾಷ್ಟ್ರೀಯ ಹಣಕಾಸು ನಿಧಿ ನವದೆಹಲಿಯಲ್ಲಿ “South Asia Regional Training and Technical Assistance Center (SARTTAC)” ಕೇಂದ್ರವನ್ನು ಸ್ಥಾಪಿಸಿದೆ. ದಕ್ಷಿಣ ಏಷ್ಯಾದಲ್ಲಿ ಆರ್ಥಿಕ ಸಾಮರ್ಥ್ಯವನ್ನು ಅಭಿವೃದ್ದಿಪಡಿಸುವ ಸಲುವಾಗಿ ಈ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಐಎಂಎಫ್ ಹಾಗೂ ಸದಸ್ಯ ರಾಷ್ಟ್ರಗಳಾದ ಬಾಂಗ್ಲದೇಶ, ಭೂತಾನ್, ಮಾಲ್ಡೀವ್ಸ್, ನೇಪಾಳ ಮತ್ತು ಶ್ರೀಲಂಕಾ ರಾಷ್ಟ್ರಗಳ ಸಹಯೋಗದಲ್ಲಿ ಇದನ್ನು ಸ್ಥಾಪಿಸಲಾಗಿದೆ.

Question 7

7. ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಯ ಅಧೀನ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ “ಜೀನ್ ಪಿಯರ್ ಲ್ಯಾಕ್ರೊಯಾಕ್ಸ್” ಯಾವ ದೇಶದವರು?

A
ಜಪಾನ್
B
ಫ್ರಾನ್ಸ್
C
ಜರ್ಮನಿ
D
ಸ್ಪೇನ್
Question 7 Explanation: 
ಫ್ರಾನ್ಸ್

ಫ್ರಾನ್ಸ್ ನ ಜೀನ್ ಪಿಯರ್ ಲ್ಯಾಕ್ರೊಯಾಕ್ಸ್ ರವರು ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಯ ಅಧೀನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.

Question 8

8. ಕ್ರೀಡಾ ಶ್ರೇಷ್ಠತೆಗಾಗಿ ಗೌರವ ಪದವಿಯನ್ನು ಪಡೆದ ಸಂದೀಪ್ ಸಿಂಗ್ ಅವರು ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ?

A
ಕ್ರಿಕೆಟ್
B
ಹಾಕಿ
C
ಪುಟ್ಬಾಲ್
D
ಟೆನ್ನಿಸ್
Question 8 Explanation: 
ಹಾಕಿ

ಭಾರತದ ವೃತ್ತಿಪರ ಹಾಕಿ ಆಟಗಾರ ಹಾಗೂ ಹಾಕಿ ತಂಡದ ಮಾಜಿ ನಾಯಕ ಸಂದೀಪ್ ಸಿಂಗ್ ಅವರು ಕ್ರೀಡಾ ಶ್ರೇಷ್ಠತೆಗಾಗಿ ಗೌರವ ಪದವಿಯನ್ನು ಪಡೆದುಕೊಂಡಿದ್ದಾರೆ. ಆ ಮೂಲಕ ಈ ಗೌರವವನ್ನು ಪಡೆದ ಭಾರತದ ಎರಡನೇ ಕ್ರೀಡಾಪಟು. ಪಂಜಾಬ್ ನ ದೇಶ್ ಭಗತ್ ಖಾಸಗಿ ವಿಶ್ವವಿದ್ಯಾಲಯ ಇವರಿಗೆ ಪದವಿಯನ್ನು ನೀಡಿ ಗೌರವಿಸಿದೆ. ಈ ಹಿಂದೆ ದಿಲೀಪ್ ಟಿರ್ಕೆ ಅವರಿಗೆ ಸಂಬಲಪುರ್ ವಿಶ್ವವಿದ್ಯಾಲಯದಿಂದ ಗೌರವ ಪದವಿಯನ್ನು ನೀಡಿ ಗೌರವಿಸಿತ್ತು.

Question 9

9. ವಿಶ್ವ ಚೆಸ್ ಫೆಡರೇಷನ್ ನ “ಕ್ಯಾಂಡಿಡೇಟ್ ಮಾಸ್ಟರ್” ಗೌರವಕ್ಕೆ ಪಾತ್ರರಾದ ಭಾರತದ ಚೆಸ್ ಆಟಗಾರ ಯಾರು?

A
ಕುಶ್ ಭಗತ್
B
ಸಪ್ತರ್ಷಿ ರಾಯ್
C
ಸುಂದರ್ ಎಂ ಶ್ಯಾಮ್
D
ನಿರಂಜನ್
Question 9 Explanation: 
ಕುಶ್ ಭಗತ್

ಕುಶ್ ಭಗತ್, ಹಿಲ್ ಸ್ಪ್ರಿಂಗ್ ಅಂತಾರಾಷ್ಟ್ರೀಯ ಶಾಲೆಯ ದ್ವಿತೀಯ ಪಿಯು ವಿದ್ಯಾರ್ಥಿ ಅವರಿಗೆ ವಿಶ್ವ ಚೆಸ್ ಫೆಡರೇಷನ್ ನ “ಕ್ಯಾಂಡಿಡೇಟ್ ಮಾಸ್ಟರ್ (Candidate Master)” ಗೌರವ ಲಭಿಸಿದೆ.

Question 10

10. 2017 ಬ್ರಿಟನ್ ಶೌರ್ಯ ಪ್ರಶಸ್ತಿಗೆ ಭಾಜನರಾಗಿರುವ ಭಾರತ ಮೂಲದ ಅಧಿಕಾರಿ ಯಾರು?

A
ಹುಸೇನ್ ಭಾಷ
B
ಶಾಂದ್ ಪನೇಸರ್
C
ಸುರ್ಜಿತ್ ಸಿಂಗ್
D
ಬಾಲಾಜಿ ವರ್ಮಾ
Question 10 Explanation: 
ಶಾಂದ್ ಪನೇಸರ್

ಬೆಂಕಿ ಹೊತ್ತಿ ಉರಿಯುತ್ತಿರುವ ಮನೆಯೊಂದರಿಂದ ತಮ್ಮ ಜೀವದ ಹಂಗು ತೊರೆದು ಇಬ್ಬರನ್ನು ರಕ್ಷಿಸಿದ ಭಾರತ ಮೂಲದ ಸ್ಕಾಟ್ಲೆಂಡ್ ಯಾರ್ಡ್ ಅಧಿಕಾರಿಯೊಬ್ಬರಿಗೆ ಬ್ರಿಟನ್ನ ಶೌರ್ಯ ಪ್ರಶಸ್ತಿ ದೊರೆತಿದೆ. ಪೊಲೀಸ್ ಅಧಿಕಾರಿಗಳಾದ ಶಾಂದ್ ಪನೇಸರ್ ಮತ್ತು ಅವರ ಸಹೋದ್ಯೋಗಿ ಕ್ರೇಗ್ ನಿಕೊಲ್ಸನ್ ಅವರು ಜಂಟಿಯಾಗಿ ಈ ಪ್ರಶಸ್ತಿ ಪಡೆದಿದ್ದಾರೆ.

There are 10 questions to complete.

[button link=”http://www.karunaduexams.com/wp-content/uploads/2017/03/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಫೆಬ್ರವರಿ-17182017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ 

One Thought to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಫೆಬ್ರವರಿ ,17,18,2017”

  1. Narasimha

    Very good questions sir

Leave a Comment

This site uses Akismet to reduce spam. Learn how your comment data is processed.