ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ, ವಿಜ್ಞಾನ-ತಂತ್ರಜ್ಞಾನ, ಪರಿಸರ, ವ್ಯವಹಾರ, ಕ್ರೀಡೆ, ಪ್ರಶಸ್ತಿಗಳು, ಸುದ್ದಿಯಲ್ಲಿರುವ ವ್ಯಕ್ತಿಗಳ ಕುರಿತಾದ ಪ್ರಚಲಿತ ಘಟನೆಗಳ ಮತ್ತು ಸಾಮಾನ್ಯ ಜ್ಞಾನದ ವಸ್ತುನಿಷ್ಟ ಪ್ರಶ್ನೋತ್ತರಗಳು.

ಕ್ವಿಜ್-34 ಸಂವಿಧಾನ ಕ್ವಿಜ್

Question 1

1. ಸ್ವಾತಂತ್ರ್ಯಾ ನಂತರ ನೂರಾರು ಸಂಸ್ಥಾನ-ಪ್ರಾಂತ್ಯಗಳಿಂದ ಕೂಡಿದ್ದ ಭಾರತದಲ್ಲಿ, ಭಾಷಾವಾರು ವಿಂಗಡಣೆ ಮೂಲಕ ನೂತನ ರಾಜ್ಯಗಳು ಅಸ್ತಿತ್ವಕ್ಕೆ ಬಂದವು, ಹೀಗೆ ರಚಿತವಾದ ಮೊದಲ ರಾಜ್ಯ ಯಾವುದು?

A
ಕರ್ನಾಟಕ
B
ಮಹಾರಾಷ್ಟ್ರ
C
ಪಂಜಾಬ್
D
ಆಂಧ್ರಪ್ರದೇಶ
Question 1 Explanation: 
ಆಂಧ್ರಪ್ರದೇಶ
Question 2

2. ಸದ್ಯ ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಬಗ್ಗೆ ಚರ್ಚೆ ನಡೆದಿದ್ದು, ಭಾರತ ಸಂವಿಧಾನದಲ್ಲಿ ಇಡೀ ದೇಶಕ್ಕೆ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವಂತೆ ನಿರ್ದೇಶಿಸುವ ವಿಧಿ ಯಾವುದು?

A
44 ನೇ ವಿಧಿ
B
40 ನೇ ವಿಧಿ
C
42 ನೇ ವಿಧಿ
D
52 ನೇ ವಿಧಿ
Question 2 Explanation: 
44 ನೇ ವಿಧಿ
Question 3

3. ಭಾರತದ ಸಂವಿಧಾನಕ್ಕೆ ನೂರಕ್ಕೂ ಅಧಿಕ ತಿದ್ದುಪಡಿಗಳು ಸೇರ್ಪಡೆಗೊಂಡಿದ್ದು, ಇವುಗಳಲ್ಲಿ ಈ ಕೆಳಕಂಡ ಯಾವ ಸಂವಿಧಾನ ತಿದ್ದುಪಡಿಯನ್ನು ‘ಮಿನಿ ಸಂವಿಧಾನ’ ಎಂದು ಕರೆಯಲಾಗುತ್ತದೆ?

A
44 ನೇ ಸಂವಿಧಾನ ತಿದ್ದುಪಡಿ
B
42 ನೇ ಸಂವಿಧಾನ ತಿದ್ದುಪಡಿ
C
52 ನೇ ಸಂವಿಧಾನ ತಿದ್ದುಪಡಿ
D
81 ನೇ ಸಂವಿಧಾನ ತಿದ್ದುಪಡಿ
Question 3 Explanation: 
42 ನೇ ಸಂವಿಧಾನ ತಿದ್ದುಪಡಿ
Question 4

4. ಅನೇಕ ಸಂದರ್ಭಗಳಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾದಾಗ, ಸಂವಿಧಾನ ನೀಡಿದ ಹಲವಾರು ಹಕ್ಕುಗಳಲ್ಲಿ ಕೆಲವೊಂದನ್ನು ರದ್ದುಪಡಿಸಲಾಗುತ್ತದೆ. ಆದರೆ ಕೆಳಗಿನ ಯಾವ ಹಕ್ಕು ಯಾವುದೇ ಸಂದರ್ಭದಲ್ಲೂ ರದ್ದಾಗುವುದಿಲ್ಲ?

A
ಸ್ವತಂತ್ರದ ಹಕ್ಕು
B
ಸಮಾನತೆಯ ಹಕ್ಕು
C
ಜೀವಿಸುವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕು
D
ಶೋಷಣೆಯ ವಿರುದ್ಧದ ಹಕ್ಕು
Question 4 Explanation: 
ಜೀವಿಸುವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕು
Question 5

5. ಭಾರತದ ಯಾವುದೇ ರಾಜ್ಯದಲ್ಲಾಗಲಿ ಅಥವಾ ಕೇಂದ್ರ ಸರ್ಕಾರದಲ್ಲಾಗಲಿ ಸಚಿವ ಸಂಪುಟದ ಗಾತ್ರ ಆಯಾ ರಾಜ್ಯದ ಒಟ್ಟು ವಿಧಾನಸಭಾ ಸ್ಥಾನಗಳ ಆಥವಾ ಸಂಸತ್ತಿನ ಸ್ಥಾನಗಳ ಶೇ.15 ಕ್ಕಿಂತ ಹೆಚ್ಚಿರಬಾರದು ಎಂಬ ಮಿತಿಯನ್ನು ಹೇರಿದ ತಿದ್ದುಪಡಿ ಯಾವುದು?

A
42 ನೇ ಸಂವಿಧಾನ ತಿದ್ದುಪಡಿ
B
81 ನೇ ಸಂವಿಧಾನ ತಿದ್ದುಪಡಿ
C
93 ನೇ ಸಂವಿಧಾನ ತಿದ್ದುಪಡಿ
D
91 ನೇ ಸಂವಿಧಾನ ತಿದ್ದುಪಡಿ
Question 5 Explanation: 
91 ನೇ ಸಂವಿಧಾನ ತಿದ್ದುಪಡಿ
Question 6

6. ಭಾರತ ಸಂವಿಧಾನದಲ್ಲಿ ರಾಜ್ಯಸಭೆಗೆ ಸೀಮಿತ ಅಧಿಕಾರವನ್ನು ನೀಡಿದ್ದು, ಕೆಲವೊಂದು ವಿಷಯಗಳ ಬಗ್ಗೆ ಮಾತ್ರ ರಾಜ್ಯಸಭೆ ಸ್ವತಂತ್ರವಾಗಿ ನಿರ್ಧರಿಸುವ ಅವಕಾಶವನ್ನು ಹೊಂದಿದೆ. ರಾಜ್ಯಸಭೆ ಈ ಕೆಳಗಿನ ಯಾವುದನ್ನು ತಾನೇ ಸ್ವತ: ನಿರ್ಧರಿಸಬಹುದಾಗಿದೆ?

A
ಅಖಿಲ ಭಾರತ ಸೇವೆಗಳ ಸೃಷ್ಠಿ
B
ನ್ಯಾಯಾಧೀಶರ ನೇಮಕ
C
ಸಚಿವರ ಖಂಡನೆ
D
ಹಣಕಾಸು ಮಸೂದೆಯ ಪರಿಗಣನೆ
Question 6 Explanation: 
ಅಖಿಲ ಭಾರತ ಸೇವೆಗಳ ಸೃಷ್ಠಿ
Question 7

7. ಭಾರತ ಸರ್ಕಾರದ ಅತ್ಯುನ್ನತ ಕಾನೂನು ಅಧಿಕಾರಿ ಎಂದು ಈ ಕೆಳಕಂಡ ಯಾರನ್ನು ಪರಿಗಣಿಸಲಾಗುತ್ತದೆ?

A
ಕಾನೂನು ಮಂತ್ರಿ
B
ಕಾನೂನು ಕಾರ್ಯದರ್ಶಿ
C
ಅಟಾರ್ನಿ ಜನರಲ್
D
ಆಡಿಟರ್ ಜನರಲ್
Question 7 Explanation: 
ಅಟಾರ್ನಿ ಜನರಲ್
Question 8

8. ಭಾರತ ಸಂಸತ್ತಿಗೆ ಸಂಬಂಧಿಸಿದಂತೆ ‘ಶೂನ್ಯ ವೇಳೆ’ ಎಂಬುದು ಯಾವುದಕ್ಕೆ ಸಂಬಂಧಿಸಿದೆ?

A
ಪ್ರಶ್ಯೋತ್ತರ ವೇಳೆಯ ಹಿಂದಿನ ಅವಧಿ
B
ಪ್ರಶ್ಯೋತ್ತರ ವೇಳೆ ಮತ್ತು ಮುಂದಿನ ಚರ್ಚೆಯ ನಡುವಿನ ಅವಧಿ
C
ಚರ್ಚೆಯ ಗೊತ್ತುವಳಿಗಳು ಅನುಮೋದಿಸಲ್ಪಟ್ಟ ಅವಧಿ
D
ಅಧಿವೇಶನದ ಮೊದಲನೇ ಒಂದು ಗಂಟೆ ಅವಧಿ
Question 8 Explanation: 
ಪ್ರಶ್ಯೋತ್ತರ ವೇಳೆ ಮತ್ತು ಮುಂದಿನ ಚರ್ಚೆಯ ನಡುವಿನ ಅವಧಿ
Question 9

9. ಭಾರತ ಸಂವಿಧಾನದಲ್ಲಿ 93 ನೇ ತಿದ್ದುಪಡಿ ಮೂಲಕ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೊಳಿಸಲಾಯಿತು, ಪಂಚಾಯತ್ ವ್ಯವಸ್ಥೆಯು ಆಧರಿಸಿರುವ ತತ್ವ……………………….

A
ಅಧಿಕಾರ ವಿಕೇಂದ್ರಿಕರಣ
B
ಪ್ರಜಾಪ್ರಭುತ್ವ ವಿಕೇಂದ್ರಿಕರಣ
C
ಅಧಿಕಾರ ವಿಭಜನೆ
D
ಸರ್ಕಾರ ವಿಭಜನೆ
Question 9 Explanation: 
ಅಧಿಕಾರ ವಿಕೇಂದ್ರಿಕರಣ
Question 10

10. ಈ ಕೆಳಕಂಡ ಯಾವ ಸರ್ಕಾರಿ ಸೇವೆ ‘ಅಖಿಲ ಭಾರತ ಸೇವೆ’ಗಳ ಗುಂಪಿಗೆ ಸೇರಿಲ್ಲ?

A
ಭಾರತೀಯ ಆಡಳಿತ ಸೇವೆ
B
ಭಾರತೀಯ ವಿದೇಶಾಂಗ ಸೇವೆ
C
ಭಾರತೀಯ ಪೊಲೀಸ್ ಸೇವೆ
D
ಭಾರತೀಯ ಅರಣ್ಯ ಸೇವೆ
Question 10 Explanation: 
ಭಾರತೀಯ ವಿದೇಶಾಂಗ ಸೇವೆ
There are 10 questions to complete.

[button link=”http://www.karunaduexams.com/wp-content/uploads/2016/12/ಕ್ವಿಜ್-34.pdf“]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

12 Thoughts to “ಸಾಮಾನ್ಯ ಜ್ಞಾನ ಕ್ವೀಜ್ 33”

  1. ASHWINI R

    Nice questions for revision

  2. Krishna

    Good.
    Keep updating more questions daily.
    Thanks.

  3. More questions daily update

  4. Thimmanna

    super qution dir

  5. Karibasapa m

    Good way

  6. Yamanur

    Good qoution Sir

  7. SATEESH

    Please update new co
    mputer quiz questions

  8. Ashok

    Indian foreign service iasnslli ilva sir

Leave a Reply to Shivappa Cancel reply

This site uses Akismet to reduce spam. Learn how your comment data is processed.